Advertisement

ಉದ್ಯೋಗಿಗಳ ಮೇಲಿನ ದೌರ್ಜನ್ಯಕೆ ಖಂಡನೆ

02:59 PM Jun 18, 2017 | Team Udayavani |

ಕಲಬುರಗಿ: ಜಿವಿಆರ್‌ಎಂಪಿ ಟೋಲ್‌ ನಾಕಾಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕನ್ನಡಿಗ ಉದ್ಯೋಗಿಗಳ ಮೇಲೆ ಸಂಸ್ಥೆಯು ಶೋಷಣೆ ಮಾಡುತ್ತಿದ್ದು, ಕೂಡಲೇ ಸಂಸ್ಥೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಮಾಡಬೂಳ ಮುಖ್ಯ ಟೋಲ್‌ ನಾಕಾವನ್ನು ಜೈ ಕನ್ನಡಿಗರ ರಕ್ಷಣಾ ವೇದಿಕೆ ಕಾರ್ಯಕರ್ತರು ಶನಿವಾರ ಬಂದ್‌ ಮಾಡಿ ಟೈರ್‌ ಸುಟ್ಟು ಪ್ರತಿಭಟಿಸಿದರು. 

Advertisement

ಪ್ರತಿಭಟನೆಕಾರರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿ, ಈ ಹಿಂದೆ ನಾಕಾಗಳಲ್ಲಿ ಕನ್ನಡಿಗ ಉದ್ಯೋಗಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಶೋಷಣೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಮನೆ ಎದುರು ಧರಣಿ ಮಾಡಿದರೂ ಪ್ರಯೋಜನ ಆಗಲಿಲ್ಲ.

ಆದ್ದರಿಂದ ಇವತ್ತು ಟೋಲ್‌ ಬಂದ್‌ ಮಾಡಿ ಹೋರಾಟ ಮಾಡಿದ್ದೇವೆ ಎಂದು ತಿಳಿಸಿದರು. ಜಿಲ್ಲೆಯ ಸರಸಂಬಾ, ಪಟ್ಟಣ, ಮಾಡಬೂಳ ಹಾಗೂ ರಿಬ್ಬನಪಲ್ಲಿ ಟೋಲ್‌ ನಾಕಾಗಳಲ್ಲಿ ಸುಮಾರು 90 ಜನ ಕನ್ನಡಿಗ ಉದ್ಯೋಗಿಗಳು ಕೆಳದರ್ಜೆಯ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಆಂಧ್ರ ಮೂಲ ಸಂಸ್ಥೆಯಾಗಿರುವುದರಿಂದ ಮೇಲಾ ಧಿಕಾರಿಗಳೆಲ್ಲ ಆಂಧ್ರದವರೇ, ಹೀಗಾಗಿ ಕನ್ನಡಿಗರ ಮೇಲೆ ಶೋಷಣೆ ನಡೆಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಿಬ್ಬಂದಿಗಳಿಗೆ ಸರಿಯಾಗಿ ವೇತನ ಕೊಡುತ್ತಿಲ್ಲ. ಯಾವುದೇ ಮೂಲಭೂತ ಸೌಲಭ್ಯಗಳನ್ನು ಒದಗಿಸುತ್ತಿಲ್ಲ.

ವೇತನ ತಾರತಮ್ಯ ಮಾಡಲಾಗುತ್ತಿದೆ. ಹೆಚ್ಚು ಕಡಿಮೆ ಆಕ್ಷೇಪಿಸಿದರೆ ಉದ್ಯೋಗದಿಂದ ತೆಗೆದುಹಾಕುವ ಬೆದರಿಕೆ ಹಾಕಲಾಗುತ್ತಿದೆ ಎಂದು ಅವರು ಆರೋಪಿಸಿದರು. ಕನ್ನಡಿಗರಿಗೆ ಶೇಕಡಾ 40ರಷ್ಟು ಇನ್‌ಕ್ರಿಮೆಂಟ್‌ ಮತ್ತು ಮುಂಬಡ್ತಿ ನೀಡುವಂತೆ, ಪ್ರತಿ ತಿಂಗಳು 5ರೊಳಗೆ ವೇತನ ಪಾವತಿಸುವಂತೆ, ಭವಿಷ್ಯನಿಧಿ ನೀಡುವಲ್ಲಿ ಶೇಕಡಾ 50ರಷ್ಟು ಕಾರ್ಮಿಕರದ್ದು, 

Advertisement

ಶೇಕಡಾ 50ರಷ್ಟು ಕಂಪನಿಯಿಂದ ಕಡಿತ ಮಾಡಬೇಕಾಗಿದ್ದು, ಕಾರ್ಮಿಕರದ್ದೇ ಶೇಕಡಾ 100ರಷ್ಟು ಕಡಿತ ಮಾಡುವುದನ್ನು ತಡೆಯುವಂತೆ, ಸರ್ಕಾರದ ನಿಯಮಗಳ ಅನುಸಾರ ದಿನಕ್ಕೆ 8 ಗಂಟೆಗಳ ಕಾಲ ಕಾರ್ಯನಿರ್ವಹಣೆ ಅವ ಧಿ ನಿಗದಿಪಡಿಸುವಂತೆ, ಇಎಸ್‌ಐ ಸೌಲಭ್ಯವನ್ನು ಕೊಡುವಂತೆ, ಕೇಂದ್ರ ಸರ್ಕಾರದ ಆದೇಶದಂತೆ ಟೋಲ್‌ ನಾಕಾಗಳಲ್ಲಿ ಹಣ ಸ್ವೀಕರಿಸಲು ಸ್ವೆ„ಪ್‌ ಮಶಿನ್‌ ಕಡ್ಡಾಯವಾಗಿ ಬಳಸುವಂತೆ,

ಹಬ್ಬ ಹರಿದಿನಗಳಂದು, ಸರ್ಕಾರಿ ರಜೆಗಳಂದು ಕಾರ್ಯನಿರ್ವಹಿಸಿದ ಕಾರ್ಮಿಕರಿಗೆ ಹೆಚ್ಚಿನ ವೇತನ ನಿಡುವಂತೆ, ಹೆಚ್ಚಿನ ಸಮಯ ನಿರ್ವಹಿಸಿದವರಿಗೆ ಓಟಿ ಕೊಡುವಂತೆ, ಟೋಲ್‌ ನಾಕಾದಲ್ಲಿ ಚಿಲ್ಲರೆ ಹಣಕ್ಕಾಗಿ ಬಿಸ್ಕಿಟ್‌ ಮತ್ತು ಚಾಕ್‌ಲೇಟ್‌ ನೀಡುವುದನ್ನು ತಡೆಯುವಂತೆ, ಸಿಬ್ಬಂದಿಗೆ ಗುರುತಿನ ಚೀಟಿ ಮತ್ತು ಸಮವಸ್ತ್ರಗಳನ್ನು ಕಂಪೆನಿ ಕಡ್ಡಾಯವಾಗಿ ಕೊಡುವಂತೆ ಒತ್ತಾಯಿಸಿದರು. 

ಪ್ರತಿಭಟನೆಯಲ್ಲಿ ಅಧ್ಯಕ್ಷ ಸಚಿನ್‌ ಎಸ್‌. ಫರಹತಾಬಾದ, ಕಾಶಿನಾಥ ಮಾಳಗೆ, ಲಕ್ಷಿಕಾಂತ ಉದನೂರು, ಸಂದೇಶ ಪವಾರ, ಶಿವು ಮಾಡಬೂಲ್‌, ಅಂಬು ಮಸ್ಕಿ, ಸತೀಶ್‌ ಫರತಾಬಾದ, ಮಲ್ಲಿಕಾರ್ಜುನ ಶೆಟ್ಟಿ, ರಾಜು ಹರಸೂರ, ರಾಹುಲ ಫರತಾಬಾದ, ಸುರೇಶ ಹನಗುಂಡಿ, ಎಸ್‌.ಎಸ್‌. ಅಹ್ಮದ್‌, ಲಕ್ಷಿಕಾಂತ ಹೋಲ್ಡ್‌ ಮುಂತಾದವರು ಪಾಲ್ಗೊಂಡಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next