Advertisement

ಭಾರತ್‌ ಬಂದ್‌ ಅಲ್ಲಲ್ಲಿ ಹಿಂಸಾಚಾರ

12:24 PM Feb 09, 2019 | mahesh |

ಹೊಸದಿಲ್ಲಿ: ಕೇಂದ್ರ ಸರಕಾರದ ಕಾರ್ಮಿಕ ನೀತಿಯನ್ನು ಖಂಡಿಸಿ ಕರೆ ನೀಡಲಾಗಿದ್ದ “ಭಾರತ್‌ ಬಂದ್‌’ನ ಎರಡನೇ ದಿನವಾದ ಬುಧವಾರ ಕೆಲವು ರಾಜ್ಯಗಳಲ್ಲಿ ದೊಡ್ಡ ಮಟ್ಟದ ಪ್ರತಿಭಟನೆಗಳು, ರಸ್ತೆ ತಡೆ, ರೈಲು ತಡೆಗಳನ್ನು ನಡೆಸಲಾಗಿದೆ.

Advertisement

ದೇಶದ 10 ಮಹತ್ವದ ಕಾರ್ಮಿಕ ವಲಯಗಳೂ ಮುಷ್ಕರದಲ್ಲಿ ಭಾಗವಹಿಸಿದ್ದರಿಂದ, ಗಣಿಗಾರಿಕೆ, ರಸ್ತೆ ಸಾರಿಗೆ, ವಿದ್ಯುತ್‌ ಪೂರೈಕೆ ಮುಂತಾದ ವಲಯಗಳಿಗೆ ಕೊಂಚ ತೊಂದರೆಯಾಗಿತ್ತು. ಪಶ್ಚಿಮ ಬಂಗಾಳದ ಹೌರಾ ಜಿಲ್ಲೆ ಇತರೆಡೆ ನಡೆದ ಪ್ರತಿಭಟನೆಗಳ ವೇಳೆ ಶಾಲಾ ಬಸ್ಸುಗಳ ಮೇಲೆ ಕಿರಾತಕರು ಕಲ್ಲು ತೂರಾಟ ನಡೆಸಿದರು.

ತಿರುವನಂತಪರದಲ್ಲಿ ಎಸ್‌ಬಿಐ ಶಾಖೆಯೊಂದರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ನಡೆಸಿ ದಾಂಧಲೆ ನಡೆಸಿದ್ದಾರೆ. ತಿರುವನಂತಪುರಂ-ಹೈದರಾಬಾದ್‌ಶಬರಿ ಎಕ್ಸ್‌ಪ್ರೆಸ್‌, ಕೊಟ್ಟಾಯಂ-ನಿಲಾಂಬುರ್‌, ವಯನಾಡ್‌ ಎಕ್ಸ್‌ಪ್ರೆಸ್‌ ರೈಲುಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು. ಮುಂಬೈ ಮಹಾನಗರ ಸಾರಿಗೆ ಇಲಾಖೆಯ 32,000 ನೌಕರರು ಪ್ರತಿಭಟನೆಗೆ ಇಳಿದಿದ್ದರಿಂದ ಇಡೀ ಮುಂಬೈಗೆ ಕೇವಲ 5 ಬಸ್ಸುಗಳು ಸಂಚಾರ ಸೇವೆ ನೀಡಿದವು. ಕಾರ್ಮಿಕ ಸಂಘಟನೆಗಳು ಇಲ್ಲದೆ ಇರುವ ವಿಚಾರದ ಬಗ್ಗೆ ಪ್ರತಿಭಟನೆ ನಡೆಸಿವೆ ಎಂದಿದ್ದಾರೆ ಸಚಿವ ಜೇಟ್ಲಿ.

Advertisement

Udayavani is now on Telegram. Click here to join our channel and stay updated with the latest news.

Next