Advertisement

ಕೋವಿಡ್ ನಿಯಮ‌ ಮೀರಿ ಮದುವೆಯ ಪುರವಂತಿಕೆ ಮೆರವಣಿಗೆ

09:52 AM Jun 13, 2021 | Suhan S |

ವಿಜಯಪುರ: ರಾಜ್ಯದಲ್ಲಿ ಕೋವಿಡ್ ಲಾಕಡೌನ್ ನಿರ್ಬಂಧ ಜಾರಿಯಲ್ಲಿದ್ದರೂ ವಿಜಯಪುರ ನಗರದಲ್ಲಿ ಮದುವೆ ಸಂದರ್ಭದಲ್ಲಿ ನಡೆಸುವ ಧಾರ್ಮಿಕ- ಸಾಂಪ್ರದಾಯಿಕ ಪುರವಂತಿಕೆ (ವೀರಗಾಸೆ) ಮೆರವಣಿಗೆ ನಡೆಸಿದ ಘಟನೆ ವರದಿಯಾಗಿದೆ.

Advertisement

ಭಾಜಾ-ಭಜಂತ್ರಿ ಸಹಿತ ಸುಮಾರು ಐವತ್ತಕ್ಕೂ ಹೆಚ್ಚು ಜನರಿಂದ ಕೂಡಿದ್ದ ಪುರವಂತಿಕೆ ಮೆರವಣಿಗೆ ಬಾಗಿಲು ಹಾಕಿದ್ದ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದೆ.

ಇದನ್ನೂ ಓದಿ: ಗಂಡನ ಬುದ್ಧಿಮಾತಿಗೆ ರೊಚ್ಚಿಗೆದ್ದ ಪತ್ನಿಯಿಂದ ಸುಪಾರಿ ಕೊಟ್ಟು ಹತ್ಯೆಗೆ ಪ್ಲ್ಯಾನ್.!

ಆದರೆ ಪುರವಂತಿಕೆ ಮೆರವಣಿಗೆ ನಡೆಸಿದವರು ಯಾರು, ಯಾರ ವಿವಾಹ, ವಿವಾಹದ ಸಂದರ್ಭದಲ್ಲಿ ಇದಕ್ಕೆ ಅನುಮತಿ ನೀಡಲಾಗಿತ್ತೆ ಎಂಬ ವಿಷಯ ಇನ್ನಷ್ಟೇ ಹೊರಬೀಳಬೇಕಿದೆ.

Advertisement

ಇದಲ್ಲದೇ ಸದರಿ ಮೆರವಣಿಗೆ ನಡೆಸಿದ ಬಗ್ಗೆ ಯಾವುದೇ ಅಧಿಕಾರಿಗಳು ಈ ವರೆಗೆ ಪರಿಶೀಲನೆ ನಡೆಸಿದ, ಕ್ರಮ ಕೈಗೊಂಡ ಮಾಹಿತಿ ಲಭ್ಯವಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next