Advertisement

ವಿನೂ ಮಂಕಡ್‌ ಏಕದಿನ ಕ್ರಿಕೆಟ್‌: ಕರ್ನಾಟಕ ಚಾಂಪಿಯನ್‌

06:45 AM Oct 15, 2017 | Team Udayavani |

ಬೆಂಗಳೂರು: 19 ವರ್ಷ ವಯೋಮಿತಿಯೊಳಗಿನ ದಕ್ಷಿಣ ವಲಯ ವಿನೂ ಮಂಕಡ್‌ ಕ್ರಿಕೆಟ್‌ ಕೂಟದಲ್ಲಿ ಆತಿಥೇಯ ಕರ್ನಾಟಕ ತಂಡ ಚಾಂಪಿಯನ್‌ ಆಗಿದೆ.

Advertisement

ಬೆಂಗಳೂರಿನ ಆಲೂರು ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಕೇರಳ ವಿರುದ್ಧ ನಡೆದ ಅಂತಿಮ ಲೀಗ್‌ ಪಂದ್ಯ ಮಳೆಗೆ ಸಂಪೂರ್ಣವಾಗಿ ಆಹುತಿಯಾಯಿತು. ಹೀಗಿದ್ದರೂ ರಾಜ್ಯ ತಂಡ ಒಟ್ಟಾರೆ ಪ್ರದರ್ಶನದ ಆಧಾರದಲ್ಲಿ 14 ಅಂಕ ಪಡೆದುಕೊಂಡು ರನ್‌ರೇಟ್‌ ಆಧಾರದಲ್ಲಿ ಚಾಂಪಿಯನ್‌ ಆಯಿತು. ರಾಜ್ಯದಷ್ಟೇ ಒಟ್ಟಾರೆ ಅಂಕ ಪಡೆದಿದ್ದರೂ ಆಂಧ್ರಪ್ರದೇಶ ಹಾಗೂ ಹೈದರಾಬಾದ್‌ ತಂಡಗಳು ರನ್‌ರೇಟ್‌ನಲ್ಲಿ ಹಿಂದೆ ಬಿದ್ದಿದ್ದರಿಂದ ಚಾಂಪಿಯನ್‌ ಆಗಲು ಸಾಧ್ಯವಾಗಲಿಲ್ಲ. ಆಂಧ್ರ ಪ್ರದೇಶ ತಂಡ ರನ್ನರ್‌ಅಪ್‌ ಪ್ರಶಸ್ತಿ ಪಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next