Advertisement

ಪುಸ್ತಕವೇ ಆಹ್ವಾನ ಪತ್ರಿಕೆ!

05:27 PM Aug 31, 2017 | Team Udayavani |

ಈ ಕಾಲದಲ್ಲಿ ಆಹ್ವಾನ ಪತ್ರಿಕೆಗಳು ಅದೆಷ್ಟು ಡಿಫ‌ರೆಂಟ್‌ ಆಗಿರುತ್ತದೆ ಎಂದು ನಿಮಗೆ ಗೊತ್ತೇ ಇದೆ. ಅದೇ ರೀತಿ, “ಅನಂತು ವರ್ಸಸ್‌ ನುಸ್ರತ್‌’ ತಂಡವು ಒಂದು ಹೊಸ ಪ್ರಯೋಗ ಮಾಡಿದೆ. ಚಿತ್ರದ ಮುಹೂರ್ತವು ಮುಂದಿನ ಸೋಮವಾರ ಅಂದರೆ ಸೆಪ್ಟೆಂಬರ್‌ 4ರಂದು ಕಂಠೀರವ ಸ್ಟುಡಿಯೋದಲ್ಲಿ ನಡೆಯಲಿದೆ. ಆ ಮುಹೂರ್ತ ಸಮಾರಂಭಕ್ಕೆಂದು ಚಿತ್ರತಂಡವು, ಕಾನೂನು ಪುಸ್ತಕದ ರೂಪದಲ್ಲಿ ಆಹ್ವಾನ ಪತ್ರಿಕೆಯನ್ನು ಮಾಡಿಸಿದೆ.

Advertisement

ಹೌದು, “ಅನಂತು ವರ್ಸಸ್‌ ನುಸ್ರತ್‌’ ಚಿತ್ರದ ಆಹ್ವಾನ ಪತ್ರಿಕೆಯು ಲಾ ಬುಕ್‌ ಶೈಲಿಯಲ್ಲಿದೆ. ಚಿತ್ರತಂಡವು ಹಾಗೆ ಆಹ್ವಾನ ಪತ್ರಿಕೆ ಮಾಡಿಸುವುದಕ್ಕೂ ಕಾರಣವಿದೆ. ಅದೇನೆಂದರೆ, ಚಿತ್ರದಲ್ಲಿ ನಾಯಕ ಮತ್ತು ನಾಯಕಿ ಇಬ್ಬರೂ ಲಾಯರ್‌ ಪಾತ್ರ ಮಾಡುತ್ತಿದ್ದು, ನ್ಯಾಯಾಲಯದಲ್ಲಿ ಅವರಿಬ್ಬರ ಲವ್‌ ಆಗುತ್ತದಂತೆ. ಅದೇ ಕಾರಣಕ್ಕೆ ಆಹ್ವಾನ ಪತ್ರಿಕೆಯನ್ನೂ ಕಾನೂನು ಪುಸ್ತಕದ ರೀತಿ ಡಿಸೈನ್‌ ಮಾಡಲಾಗಿದೆ. ಅಂದ ಹಾಗೆ, ಈ ಮುಹೂರ್ತ ಸಮಾರಂಭಕ್ಕೆ ಶಿವರಾಜಕುಮಾರ್‌, ರಾಘವೇಂದ್ರ ರಾಜಕುಮಾರ್‌ ಮತ್ತು ಪುನೀತ್‌ ರಾಜಕುಮಾರ್‌ ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ. ಮಿಕ್ಕಂತೆ ಡಾ. ರಾಜ್‌ ಕುಟುಂಬದ ಹಲವು ಸದಸ್ಯರು ಈ ಮುಹೂರ್ತದಲ್ಲಿ ಭಾಗವಹಿಸಲಿದ್ದಾರೆ. 

ಚಿತ್ರದಲ್ಲಿ ಅನುಂತು ಪಾತ್ರವನ್ನು ವಿನಯ್‌ ರಾಜಕುಮಾರ್‌ ಮಾಡಿದರೆ, ನುಸ್ರತ್‌ ಪಾತ್ರಕ್ಕೆ ಇನ್ನೂ ನಾಯಕಿಯ ಹುಡುಕಾಟ ನಡೆಯುತ್ತಿದ್ದು, ಸದ್ಯದಲ್ಲೇ ಆಯ್ಕೆ ಮಾಡಲಾಗುವುದು ಎನ್ನುತ್ತಾರೆ ಚಿತ್ರದ ನಿರ್ದೇಶಕ ಸುಧೀರ್‌ ಶಾನುಭೋಗ್‌. ಚಿತ್ರದ ಚಿತ್ರೀಕರಣ ಸೆಪ್ಟೆಂಬರ್‌ ಕೊನೆ ಅಥವಾ ಅಕ್ಟೋಬರ್‌ ನಿಂದ ನಡೆಯಲಿದೆ. ಚಿತ್ರಕ್ಕೆ ಸುನಾದ್‌ ಗೌತಮ್‌ ಸಂಗೀತ ಸಂಯೋಜಿಸಿದರೆ, ಅಭಿಷೇಕ್‌ ಕಾಸರಗೋಡು ಛಾಯಾಗ್ರಹಣ ಮಾಡುತ್ತಿದ್ದಾರೆ.

“ಅನಂತು ವರ್ಸಸ್‌ ನುಸ್ರತ್‌’ ಚಿತ್ರಕ್ಕೂ ಮುನ್ನ ಸುದ್ದಿಯಾದ ಇನ್ನೊಂದು ಚಿತ್ರವೆಂದರೆ, ಅದು “ಅಚ್ಚರಿ’. ವಿನಯ್‌ ರಾಜಕುಮಾರ್‌ ಅಭಿನಯದ ಈ ಚಿತ್ರ ಇಷ್ಟರಲ್ಲಾಗಲೇ ಶುರುವಾಗಬೇಕಿತ್ತು. ಆದರೆ, ಈ ಚಿತ್ರ ನಿಂತಿದೆ ಎಂಬಂತಹ ಸುದ್ದಿಯೊಂದು ಗಾಂಧಿನಗರದಲ್ಲಿ ಓಡಾಡುತ್ತಿದೆ. ಆದರೆ, ಈ ಸುದ್ದಿ ಸುಳ್ಳು ಎನ್ನುತ್ತಾರೆ ಆ ಚಿತ್ರದ ನಿರ್ದೇಶಕ ಸುನೀಲ್‌ ತಾಳ್ಯ.
“ನಮ್ಮ ಚಿತ್ರ ವಿನಯ್‌ ರಾಜಕುಮಾರ್‌ ಅವರ ಮೂರನೆಯ ಚಿತ್ರವಾಗಿ ಇಷ್ಟರಲ್ಲಾಗಲೇ ಶುರುವಾಗಬೇಕಿತ್ತು. ಆದರೆ, ಕಾರಣಾಂತರದಿಂದ ಸ್ವಲ್ಪ ತಡವಾಗಿದೆ ಅಷ್ಟೇ. “ಅನಂತು ವರ್ಸಸ್‌ ನುಸ್ರತ್‌’ ನಂತರ ನಮ್ಮ ಚಿತ್ರ  ರಂಭವಾಗಲಿದ್ದು, “ಅಚ್ಚರಿ’ಯು ವಿನಯ್‌ ರಾಜಕುಮಾರ್‌ ಅವರ 4ನೇ ಚಿತ್ರವಾಗಲಿದೆ’ ಎಂದು ಸ್ಪಷ್ಟಪಡಿಸುತ್ತಾರೆ ಸುನೀಲ್‌ ತಾಳ್ಯ.

Advertisement

Udayavani is now on Telegram. Click here to join our channel and stay updated with the latest news.

Next