Advertisement

ಮತ್ತೆ ಹಿಂಡಲಗಾ ಜೈಲಿಗೆ ವಿನಯ್ ಕುಲಕರ್ಣಿ

05:39 PM Nov 09, 2020 | Suhan S |

ಬೆಳಗಾವಿ: ಯೋಗೀಶ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿಯನ್ನು ಸಿಬಿಐ ಅಧಿಕಾರಿಗಳು ಸೋಮವಾರ ಹಿಂಡಲಗಾ ಜೈಲಿಗೆ ಕರೆತಂದರು.

Advertisement

ಧಾರವಾಡ ಜಿ.ಪಂ. ಸದಸ್ಯ ಯೋಗೀಶ್‌ಗೌಡ ಕೊಲೆ ಕೇಸ್‌ನಲ್ಲಿ ಬಂಧಿತರಾಗಿರುವ ವಿನಯ್ ಕುಲಕರ್ಣಿ ಎರಡನೇ ಬಾರಿಗೆ ಹಿಂಡಲಗಾ ಜೈಲಿಗೆ ಎಂಟ್ರಿ ಕೊಟ್ಟಂತಾಯಿತು. ಮೂರು ದಿನಗಳ ಕಾಲ ಸಿಬಿಐ ಕಸ್ಟಡಿಯಲ್ಲಿದ್ದು, ವಿಚಾರಣೆ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಧಾರವಾಡ 3ನೇ ಹೆಚ್ಚುವರಿ ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ.

ಸಿಬಿಐ ಅಧಿಕಾರಿಗಳು ಬೆಳಗಾವಿಯ ಹಿಂಡಲಗಾ ಜೈಲಿಗೆ ಕರೆ ತರುವಾಗ ವಿನಯ್ ಕುಲಕರ್ಣಿ ಅಭಿಮಾನಿಯತ್ತ ಕೈ ಬೀಸಿ ಒಳ ನಡೆದರು. ಪೊಲೀಸ್ ಬಂದೋಬಸ್ತ್ ನಲ್ಲಿ ವಿನಯ್ ಅವರನ್ನು ಕರೆ ತರಲಾಗಿತ್ತು.

ಕೋರ್ಟ್ ಆದೇಶ ಪ್ರತಿ ನೀಡಿ ವಿನಯ್ ಕುಲಕರ್ಣಿ ಹಸ್ತಾಂತರ ಪ್ರಕ್ರಿಯೆ ನಡೆಸಲಾಯಿತು. ಹಿಂಡಲಗಾ ಜೈಲಿನ ಕ್ವಾರಂಟೈನ್ ಸೆಲ್‌ನಲ್ಲಿ ವಿನಯ್ ಅವರನ್ನು ಇರಿಸಲಾಯಿತು. ಮೂರು ನಾಲ್ಕು ಕ್ಯಾರಿ ಬ್ಯಾಗ್‌ನಲ್ಲಿ ವಿನಯ್ ಅವರ ಬಟ್ಟೆಗಳನ್ನು ತರಲಾಗಿತ್ತು. ಬಟ್ಟೆಗಳ ಬ್ಯಾಗ್ ಸಮೇತವೇ ವಿನಯ್ ಜೈಲಿನೊಳಗೆ ಹೋದರು.

Advertisement

Udayavani is now on Telegram. Click here to join our channel and stay updated with the latest news.

Next