Advertisement

ಹನುಮ ಜನ್ಮಭೂಮಿ ವಿವಾದ: ಟಿಟಿಡಿ ಅಧ್ಯಕ್ಷರ ಜೊತೆ ಮಾತನಾಡಿ ಸಮಸ್ಯೆ ಪರಿಹಾರ: ವಿನಯ್ ಗುರೂಜಿ

06:50 PM Jun 28, 2022 | Team Udayavani |

ಗಂಗಾವತಿ: ಆನೆಗುಂದಿಯ ಕಿಷ್ಕಿಂದಾ ಅಂಜನಾದ್ರಿಯಲ್ಲಿಯೇ ಹನುಮಂತ ಜನಿಸಿದ್ದು ಎನ್ನುವ ದಾಖಲೆಗಳಿದ್ದು ಇದನ್ನು ಟಿಟಿಡಿಯವರು ವಿನಾಕಾರಣ ಸಮಸ್ಯೆ ಮಾಡುತ್ತಿದ್ದಾರೆ ಈ ಕುರಿತು ಟಿಟಿಡಿ ಅಧ್ಯಕ್ಷ ಸುಬ್ಬಾರಾವ್ ಅವರೊಂದಿಗೆ ಮಾತನಾಡಿ ಸಮಸ್ಯೆ ಪರಿಹಾರ ಮಾಡಲಾಗುತ್ತದೆ ಎಂದು ಗೌರಿಗದ್ದೆಯ ಅವಧೂತ ಮಠದ ವಿನಯ್ ಗುರೂಜಿ ಹೇಳಿದರು .

Advertisement

ಅವರು ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಅಂಜನಾದ್ರಿ ಗೆ ಭೇಟಿ ನೀಡಿ ದೇವರ ದರ್ಶನ ಪಡೆದ ನಂತರ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.

ಅಂಜನಾದ್ರಿಯಂತಹ ಧಾರ್ಮಿಕ ಕ್ಷೇತ್ರ ಮುನ್ನೆಲೆಗೆ ಬರುವ ಸಂದರ್ಭದಲ್ಲಿ ವಿವಾದಗಳು ಸಹಜ. ಕರ್ನಾಟಕದ ಕಿಷ್ಕಿಂಧೆಯೇ ಹನುಮನ ಜನ್ಮಸ್ಥಳ ಎನ್ನುವುದರಲ್ಲಿ ಸಂದೇಹವಿಲ್ಲ. ಟಿಟಿಡಿಯ ಅಧ್ಯಕ್ಷ ಸುಬ್ಬಾರಾವ್ ನನ್ನ ಶಿಷ್ಯರಾಗಿದ್ದಾರೆ. ಹನುಮನ ಜನ್ಮಭೂಮಿ ಸ್ಥಳದ ವಿವಾದಕ್ಕೆ ಸಂಬಂಧಿಸಿದಂತೆ ಮಾತನಾಡುತ್ತೇನೆ ಎಂದರು.

ಈ ಸಂದರ್ಭದಲ್ಲಿ  ಶಾಸಕ ಪರಣ್ಣ ಮುನವಳ್ಳಿ.ಬಿಜೆಪಿ ಮುಖಂಡರಾದ ಎಚ್.ಆರ್. ಚನ್ನಕೇಶವ, ಸಿಂಗನಾಳ್ ವಿರುಪಾಕ್ಷಪ್ಪ ,ಕೆಲೋಜಿ ಸಂತೋಷ ಸೇರಿದಂತೆ ಅನೇಕರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next