Advertisement

ಮಸೀದಿ ನಿರ್ಮಾಣಕ್ಕೆ ಗ್ರಾಮಸ್ಥರ ಆಕ್ಷೇಪ

03:08 PM Feb 18, 2022 | Team Udayavani |

ಚಿತ್ತಾಪುರ: ತಾಲೂಕಿನ ದಂಡೋತಿ ಗ್ರಾಮದಲ್ಲಿ ಹಿಂದೂಗಳ ಮನೆ ಇರುವೆಡೆ ಮಸೀದಿ ನಿರ್ಮಿಸುತ್ತಿರುವುದನ್ನು ಆಕ್ಷೇಪಿಸಿ ಗ್ರಾಮದ ಮುಖಂಡರು ಗ್ರಾಪಂ ಎದುರು ಪ್ರತಿಭಟನೆ ನಡೆಸಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿದರು.

Advertisement

ವಾರ್ಡ್‌ ನಂ. 4ರಲ್ಲಿ ಕಟ್ಟಡ ನಿರ್ಮಾಣಕ್ಕೆ ನೀಡಿರುವ ಪರವಾನಗಿ ಹಿಂತೆಗೆದುಕೊಳ್ಳಬೇಕು. ಕಾಮಗಾರಿ ಸ್ಥಗಿತಗೊಳಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಗ್ರಾಮದಲ್ಲಿ ಈಗಾಗಲೇ ಐದು ಮಸೀದಿಗಳಿವೆ. ಆದರೆ ಇಬ್ರಾಹಿಂ ಮುಲ್ಲಾ ಎನ್ನುವರು ಯಾತ್ರಿಕರಿಗೆ ಉಳಿದುಕೊಳ್ಳಲು ಸಮುದಾಯ ಭವನ ನಿರ್ಮಿಸುತ್ತೇವೆಂದು ಗ್ರಾಪಂ ಪಂಚಾಯಿತಿಗೆ ತಿಳಿಸಿ ಮಸೀದಿ ಕಟ್ಟುತ್ತಿದ್ದಾರೆ. ಆದ್ದರಿಂದ ಪಂಚಾಯಿತಿ ಪರವಾನಗಿ ರದ್ದುಪಡಿಸಬೇಕೆಂದು ಕೋಲಿ ಸಮಾಜದ ಯುವ ಅಧ್ಯಕ್ಷ ಸಾಬಣ್ಣ ಭರಾಟೆ ಆಗ್ರಹಿಸಿದರು.

ಗ್ರಾಮದ ಮುಖಂಡರಾದ ಹಣಮಂತ ಭರಾಟೆ, ವೀರಣ್ಣ ಕುರಕುಂಟಿ, ಶರಣು ತೊಟನಳ್ಳಿ, ರಮೇಶ ಕವಡೆ, ಶಿವಶರಣಪ್ಪ ದೌಲಮನಿ, ಸೂರ್ಯಕಾಂತ ಕೊಂಕನಳ್ಳಿ, ಹಣಮಂತ ಮಡಿಕಿ, ಸಿದ್ಧಪ್ಪ ಕೊಳ್ಳಿ, ಸಂತೋಷ ಕೊಂಕನಳ್ಳಿ, ಈರಣ್ಣ ಕೊಳ್ಳಿ, ಪ್ರಕಾಶ ಯಾದಗಿರ, ಶಿವಯೋಗಿ ತೊಟನಳ್ಳಿ, ರವಿ ಕೊಂಕನಳ್ಳಿ ಇತರರು ಈ ಸಂದರ್ಭದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next