Advertisement

ಮಕ್ಕಳನ್ನೇ ಆಸ್ತಿ ಮಾಡಿ: ಜಿಲ್ಲಾ ಹೆಚ್ಚುವರಿ ಸತ್ರ ನ್ಯಾಯಾಧೀಶ ವಿ.ಜಗದೀಶ್

05:32 PM Oct 08, 2022 | Team Udayavani |

ಶಿರಸಿ: ಮಕ್ಕಳಿಗೋಸ್ಕರ ಆಸ್ತಿ‌ ಮಾಡದೇ ಮಕ್ಕಳನ್ನೇ ಆಸ್ತಿ ಮಾಡಬೇಕು ಎಂದು ಜಿಲ್ಲಾ ಹೆಚ್ಚುವರಿ ಸತ್ರ ನ್ಯಾಯಾಧೀಶ ವಿ.ಜಗದೀಶ ಹೇಳಿದರು.ಅವರು ಮಾರಿಕಾಂಬಾ ದೇವಾಲಯದಲ್ಲಿ ಶನಿವಾರ ನವರಾತ್ರಿ ಉತ್ಸವದಲ್ಲಿ ಹಮ್ಮಿಕೊಂಡ ವಿವಿಧ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಪ್ರತಿಭಾವಂತರಿಗೆ ಬಹುಮಾನ ವಿತರಿಸಿ ಮಾತನಾಡಿದರು.

Advertisement

ಕಳೆದ ನಲ್ವತ್ತು ವರ್ಷಗಳಿಂದ ಮಾರಿಗುಡಿಯಲ್ಲಿ ನವರಾತ್ರಿ ವೇಳೆ ಸಾಂಸ್ಕೃತಿಕ, ಕ್ರೀಡಾ ಸ್ಪರ್ಧೆ ನಡೆಸಲಾಗುತ್ತದೆ. ಇದು ಮಕ್ಕಳ‌ ಪ್ರತಿಭೆ ಅನಾವರಣಕ್ಕೆ ಒಳ್ಳೆಯ ವೇದಿಕೆ ಆಗಲಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾರಿಗುಡಿ ಅಧ್ಯಕ್ಷ ಆರ್.ಜಿ.ನಾಯ್ಕ ವಹಿಸಿದ್ದರು.

ಉಪಾಧ್ಯಕ್ಷ ಸುದೇಶ ಜೋಗಳೇಕರ್, ಟ್ರಸ್ಟಿಗಳಾದ ವತ್ಸಲಾ ಹೆಗಡೆ, ಶಿವಾನಂದ ಶೆಟ್ಟಿ, ಸುಧೀರ ಹಂದ್ರಾಳ, ಬಾಬುದಾರ ಬಸವರಾಜ ಚಕ್ರಸಾಲಿ ಇತರರು ಇದ್ದರು. ಇದೇ ವೇಳೆ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ230 ಸ್ಪರ್ಧಾಳುಗಳು, ಕ್ರೀಡೆಯಲ್ಲಿ 209 ವಿಜೇತರು ಬಹುಮಾನ ಪಡೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next