Advertisement

ರಾಹುಲ್‌ ದ್ರಾವಿಡ್‌ಗೂ ಪಂಗನಾಮ ಹಾಕಿದ ವಿಕ್ರಂ ಇನ್ವೆಸ್ಟ್‌ಮೆಂಟ್‌ 

09:16 AM Mar 18, 2018 | |

ಬೆಂಗಳೂರು: ಹೂಡಿಕೆ ಹೆಸರಿನಲ್ಲಿ  ಹಲವರಿಗೆ ನೂರಾರು ಕೋಟಿ ರೂ. ವಂಚಿಸಿದ ವಿಕ್ರಂ ಇನ್‌ವೆಸ್ಟ್‌ಮೆಂಟ್‌ ಕಂಪನಿ ಕ್ರಿಕೆಟಿಗ ರಾಹುಲ್‌ ದ್ರಾವಿಡ್‌ ಅವರಿಗೂ ಭಾರಿ ವಂಚನೆ ಮಾಡಿದ್ದು, ಈ ಬಗ್ಗೆ ಸದಾಶಿವ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Advertisement

ನಾನು ಕಂಪೆನಿಯಲ್ಲಿ 20 ಕೋಟಿ ರೂ ಹೂಡಿಕೆ ಮಾಡಿದ್ದೆ, ಆಧರೆ ನನಗೆ 16 ಕೋಟಿ ರೂಪಾಯಿ ವಾಪಾಸ್‌ ನೀಡಲಾಗಿದ್ದು 4 ಕೋಟಿ ರೂ ವಂಚನೆ ಮಾಡಲಾಗಿದೆ ಎಂದು ದೂರು ದಾಖಲಿಸಿದ್ದಾರೆ. 

ವಿಕ್ರಂ ಇನ್ವೆಸ್ಟ್‌ಮೆಂಟ್‌ ಮಾಲೀಕ ರಾಘವೇಂದ್ರ ಶ್ರೀನಾಥ್‌ ಈಗಾಗಲೇ ಬಂಧನಕೊಳಗಾಗಿದ್ದು ಎಸಿಎಂಎಂ ನ್ಯಾಯಾಲಯ ಶನಿವಾರ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ. 

ವಂಚನೆ ಸಂಬಂಧ ಬನಶಂಕರಿ ಮಾತ್ರವಲ್ಲದೇ, ವಿಜಯ ನಗರ, ಜಯನಗರ ಠಾಣೆಗಳಲ್ಲೂ ಆರೋಪಿ ಗಳ ವಿರುದ್ಧ ದೂರು ದಾಖಲಾಗುತ್ತಿದ್ದು, ಸದ್ಯದಲ್ಲೇ ಆರೋಪಿಗಳನ್ನು ಆಯಾ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆ  ಸುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next