Advertisement

ಸಂಸದರಿಗೆ, ಉನ್ನತ ಅಧಿಕಾರಿಗಳಿಗೆ ವಿಕಾಂತ್‌ ರೋಣ ಪ್ರೀಮಿಯರ್‌ ಶೋ

03:20 PM Jul 27, 2022 | Team Udayavani |

ಬೆಂಗಳೂರು: ನಟ, ನಿರ್ಮಾಪಕ ಕಿಚ್ಚ ಸುದೀಪ್‌ ಅವರ ಭಾರಿ ನಿರೀಕ್ಷೆಯ ಬಿಗ್‌ಬಜೆಟ್‌ ಪ್ಯಾನ್‌ ಇಂಡಿಯಾ ಸಿನಿಮಾ “ವಿಕ್ರಾಂತ್‌ ರೋಣ” ಜು.28ರಂದು ಬಿಡಗಡೆಯಾಗುತ್ತಿದ್ದು, ಸಂಸದರು ಹಾಗೂ ಉನ್ನತ ಅಧಿಕಾರಿಗಳಿಗೆ ಪ್ರೀಮಿಯರ್‌ ಶೋ ವಿಶೇಷ ವ್ಯವಸ್ಥೆ ಮಾಡಲಾಗಿದೆ.

Advertisement

ದೆಹಲಿಯಲ್ಲಿ ಗುರುವಾರ ಬೆಳಗ್ಗೆ ಚಾಣಕ್ಯಪುರಿಯ ಪಿವಿಆರ್‌ ಥಿಯೇಟರ್‌ನಲ್ಲಿ ಹಮ್ಮಿಕೊಳ್ಳಲಾಗುತ್ತಿದ್ದು, ರಾಜ್ಯಸಭಾ ಸದಸ್ಯರು, ಲೋಕಸಭಾ ಸದಸ್ಯರು, ಕೇಂದ್ರಸರ್ಕಾರದ ಉನ್ನತ ಅಧಿಕಾರಿಗಳಿಗೆ ಆಹ್ವಾನ ನೀಡಿದ್ದು, ಚಿತ್ರ ವೀಕ್ಷಣೆಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ:‘ಲವ್‌ ಮಾಕ್ಟೇಲ್‌ 2’ ಹುಡುಗಿ ಕೈ ತುಂಬಾ ಸಿನಿಮಾ: ಸಖತ್ ಬ್ಯುಸಿಯಾದ ರಚೆಲ್‌ ಡೇವಿಡ್‌ 

ಈ ಕುರಿತು ಸಂಸದ ಪ್ರತಾಪ್‌ ಸಿಂಹ ಅವರಿಗೆ ಆಹ್ವಾನ ಬಂದಿದ್ದು, ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಚಿತ್ರ ವೀಕ್ಷಿಸಲು ಉತ್ಸುಕನಾಗಿದ್ದೇನೆ. ಆಹ್ವಾನ ಕಳುಹಿಸಿದ ಚಿತ್ರ ತಂಡಕ್ಕೆ ಧನ್ಯವಾದಗಳು ಎಂದು ಟ್ವೀಟ್‌ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next