Advertisement

Vijayapura: ಅಪರಿತ ವಾಹನ ಡಿಕ್ಕಿಯಾಗಿ ಬೈಕ್‍ ಸವಾರರಿಬ್ಬರು ಸಾವು

08:44 PM Feb 14, 2024 | Vishnudas Patil |

ವಿಜಯಪುರ : ವಿಜಯಪುರ-ಹುಬಳ್ಳಿ ರಾಷ್ಟ್ರೀಯ ಹೆದ್ದಾರಿ-218 ರಲ್ಲಿ ಕಾರಜೋಳ ಬಳಿ ಅಪರಿಚಿತ ವಾಹನ ಬೈಕ್‍ಗೆ ಡಿಕ್ಕಿಯಾಗಿ ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟ ಘಟನೆ ಜರುಗಿದೆ.

Advertisement

ಕಾರಜೋಳದ ಬಸವೇಶ್ವರ ಸಕ್ಕರೆ ಫ್ಯಾಕ್ಟರಿ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ತಡರಾತ್ರಿ ದುರ್ಘಟನೆ ಜರುಗಿದೆ. ಮೃತರನ್ನು ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದ ರಾಜೇಂದ್ರ ಜಗದೀಶ ಬಿಸನಾಳ (28), ರಾಹುಲ್ ಈರಣ್ಣ ಕಂಬಾರ (26) ಎಂದು ಗುರುತಿಸಲಾಗಿದ.

ರಾತ್ರಿ ವೇಳೆ ಬೈಕ್‍ಮೇಲೆ ಇಬ್ಬರು ಯುವಕರು ಹೊರಟಿದ್ದಾಗ ಹೆದ್ದಾರಿಯಲ್ಲಿ ನಿಂತಿದ್ದ ಅಪರಿಚಿತ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಅಪಘಾತದಲ್ಲಿ ಇಬ್ಬರೂ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿರುವ ಬಬಲೇಶ್ವರ ಠಾಣೆ ಪೆÇಲೀಸರು ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next