Advertisement

Vijayapura:ಅವಾಚ್ಯ ಶಬ್ಧ ಬಳಸಿದ ಪ್ರಯಾಣಿಕನಿಗೆ ಚಪ್ಪಲಿ ಸೇವೆ ಮಾಡಿದ ಲೇಡಿ ಕಂಡಕ್ಟರ್

03:26 PM Jan 30, 2024 | Vishnudas Patil |

ವಿಜಯಪುರ: ಪ್ರಯಾಣಿಕನೊಬ್ಬ ಅಚಾಚ್ಯ ಶಬ್ಧದಿಂದ ನಿಂದನೆ ಮಾಡಿದ್ದರಿಂದ ಕೆರಳಿದ ಮಹಿಳಾ ಕಂಡಕ್ಟರ್ ನಿಂದಕನಿಗೆ ಚಪ್ಪಲಿಯಿಂದ ಹೊಡೆದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

Advertisement

ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣಕ್ಕೆ ಬರುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ನಲ್ಲಿ ಚಿಲ್ಲರೆ ಹಣ ನೀಡುವ ವಿಷಯವಾಗಿ ಮಹಿಳಾ ಕಂಡಕ್ಟರ್ ಹಾಗೂ ಪ್ರಯಾಣಿಕನ ಮಧ್ಯೆ ಜಗಳ ಆರಂಭಗೊಂಡಿದೆ.

ಈ ಹಂತದಲ್ಲಿ ಪ್ರಯಾಣಿಕ ಮಹಿಳಾ ಕಂಡಕ್ಟರ್ ಗೆ ಅವಾಚ್ಯ ಶಬ್ಧದಿಂದ ನಿಂದಿಸಿದ್ದಾನೆ. ಇದರಿಂದ ಕೆರಳಿದ ಮಹಿಳಾ ಕಂಡಕ್ಟರ್ ನಿಂದನೆ ಮಾಡಿದ ಪ್ರಯಾಣಿಕನಿಗೆ ಸಾರ್ವಜನಿಕವಾಗಿಯೇ ಚಪ್ಪಲಿಯಿಂದ ಹೊಡೆದಿದ್ದಾಳೆ.

ಬಸ್ ಇಳಿದು ಬೈಕ್ ಮೇಲೆ ಹೊರಟ ಪ್ರಯಾಣಿಕನನ್ನು ಬಸ್ ಚಾಲಕ ತಡೆದು, ತನ್ನ ಸಹೋದ್ಯೋಗಿಗೆ ಅವಾಚ್ಯ ಶಬ್ಧದಿಂದ ನಿಂದನೆ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಪೊಲೀಸ್ ಠಾಣೆಗೆ ಬರುವಂತೆ ಪಟ್ಟು ಹಿಡಿದಿದ್ದಾರೆ.

ಈ ಹಂತದಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ಪ್ರಯಾಣಿಕ, ತನ್ನಿಂದ ತಪ್ಪಾಯ್ತು ಬಿಟ್ಟುಬಿಡಿ ಎಂದು ಅಂಗಲಾಚಿದ್ದಾನೆ. ಇಷ್ಟಾದರೂ ಸಿಟ್ಟು ತಣಿಯದ ಲೇಡಿ ಕಂಡಕ್ಟರ್, ತಾನೂ ಅವಾಚ್ಯ ಶಬ್ದಗಳಿಂದ ನಿಂದಿಸಿ, ಚಪ್ಪಲಿಯಿಂದ ಹಲ್ಲೆ ಮಾಡಿದ್ದಾಳೆ.

Advertisement

ಘಟನೆಯನ್ನು ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಘಟನೆ ಯಾವಾಗ ನಡೆಯಿತು, ನಿಂದಕ ಪ್ರಯಾಣಿಕ ಯಾರು ಎಂಬುದು ನಿಖರವಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next