Advertisement

Vijayapura; ಕಿರಿಕುಳ ತಾಳಲಾರದೆ ಮದ್ಯ ವ್ಯಸನಿ ಮಗನನ್ನು ಹತ್ಯೆಗೈದ ತಂದೆ

03:33 PM Jul 10, 2023 | Team Udayavani |

ವಿಜಯಪುರ: ಮದ್ಯ ವ್ಯಸನಿ ಮಗನ ವರ್ತನೆಯಿಂದ ರೋಸಿಹೋದ ತಂದೆಯೊಬ್ಬ ಮಗನನ್ನು ಹತ್ಯೆ ಮಾಡಿರುವ ಘಟನೆ ನಾಗಠಾಣ ಗ್ರಾಮದಲ್ಲಿ ನಡೆದಿದೆ.

Advertisement

ಹತ್ಯೆಯಾದ ಮದ್ಯ ವ್ಯಸನಿ ಮುತ್ತಪ್ಪ ಮಸಳಿ (38) ಎಂದು ಗುರುತಿಸಲಾಗಿದೆ. ಮಗನನ್ನೇ ಹತ್ಯೆ ಮಾಡಿದ ಆರೋಪದಲ್ಲಿ ಪೊಲೀಸರು ಮೃತನ ತಂದೆ ಬಸಪ್ಪ ಮಸಳಿ ಯನ್ನು ವಶಕ್ಕೆ ಪಡೆದಿದ್ದಾರೆ.

ವಿಪರೀತ ಮದ್ಯ ವ್ಯಸನಿಯಾಗಿದ್ದ ಮುತ್ತಪ್ಪ ಮದ್ಯ ಸೇವನೆಗಾಗಿ ಮನೆಯಲ್ಲಿದ್ದ ಸಾಮಾನು, ಜಮೀನಿನಲ್ಲಿನ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ. ಇದರಿಂದಾಗಿ ಕಂಗಾಲಾಗಿದ್ದ ತಂದೆ ಬಸಪ್ಪ ತನ್ನ ಮಗನಿಗೆ ಮದ್ಯ ಸೇವನೆ ಬಿಡುವಂತೆ ಬುದ್ದಿ ಮಾತು ಹೇಳುತ್ತಲೇ ಇದ್ದರು. ಆದರೂ ಮುತ್ತಪ್ಪ ಕುಡಿತದ ಚಟ ಬಿಟ್ಟಿರಲಿಲ್ಲ. ಸೋಮವಾರ ಕೂಡ ಮದ್ಯ ಸೇವಿಸಿ ಬಂದಿದ್ದ ಮಗ ಮುತ್ತಪ್ಪನ ವರ್ತನೆಯಿಂದ ರೋಷಿಹೋದ ತಂದೆ ಬಸಪ್ಪ ಬಲಬಾದ ವಸ್ತುವಿನಿಂದ ತಲೆಗೆ ಹೊಡೆದ ಪರಿಣಾಮ ಮುತ್ತಪ್ಪ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ. ಸುದ್ದಿ ತಿಳಿದ ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next