Advertisement

Hiliyana: ಮಗನ ಕುಡಿತದ ಚಟದಿಂದ ನೊಂದು ತಂದೆ ಆತ್ಮಹತ್ಯೆ

10:22 PM May 05, 2024 | Team Udayavani |

ಸಿದ್ದಾಪುರ: ಮಗನ ಮದ್ಯಸೇವನೆ ಚಟದಿಂದ ಬೇಸತ್ತ ತಂದೆ ಆತ್ಮಹತ್ಯೆಗೆ ಶರಣಾದ ಘಟನೆ ಹಿಲಿಯಾಣದಲ್ಲಿ ಸಂಭವಿಸಿದೆ.

Advertisement

ಹಿಲಿಯಾಣ ಗ್ರಾಮದ ರಾಜೇಶ್‌ ವಿಪರೀತ ಕುಡಿತದ ಚಟ ಹೊಂದಿದ್ದು, ಮನೆಯಲ್ಲಿ ಗಲಾಟೆ ಮಾಡುತ್ತಿದ್ದರು. ಇದರಿಂದ ನೊಂದು ತಂದೆ ಮಂಜು ಮರಕಾಲ (75) ಎ. 20ರಂದು ವಿಷ ಸೇವಿಸಿದರು. ಅವರನ್ನು ಮನೆಯವರು ಕೂಡಲೇ ಹಾಲಾಡಿಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲದ ಆಸ್ಪತ್ರೆಗೆ ದಾಖಲಿಸಿದರು.

ಚಿಕಿತ್ಸೆ ಫಲಕಾರಿಯಾಗದೆ ಮೇ 4ರಂದು ಅವರು ಮೃತಪಟ್ಟರು.

ಪುತ್ರಿ ಅಮಿತಾ ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next