Advertisement

ವಿಜಯಪುರ ಜಿಲ್ಲೆಗೆ ಈ ಬಾರಿ ಸಚಿವ ಸ್ಥಾನದ ವಿಶ್ವಾಸ :ಬಿಜೆಪಿ ಶಾಸಕರಿಂದ ಬಹಿರಂಗ ಪ್ರಸ್ತಾಪ

04:28 PM Aug 30, 2021 | Team Udayavani |

ಮುದ್ದೇಬಿಹಾಳ: ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಸೋಮವಾರ (ಆ.30) ನಡೆದ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಸಚಿವ ಸ್ಥಾನ ವಂಚಿತ ಜಿಲ್ಲೆಗೆ ಈ ಬಾರಿ ಸಚಿವ ಸ್ಥಾನ ಸಿಗುವ ಸಾಧ್ಯತೆ ಕುರಿತು ಶಾಸಕರಿಬ್ಬರು ಬಹಿರಂಗವಾಗಿಯೇ ಹೇಳಿಕೊಂಡ ಪ್ರಸಂಗ ನಡೆಯಿತು.

Advertisement

ಸರ್ಕಾರಿ ಆರ್‍ಎಂಎಸ್‍ಎ ಶಾಲೆಯ ನೂತನ ಕಟ್ಟಡ ಉದ್ಘಾಟನೆಯಲ್ಲಿ ಮುಖ್ಯ ಅತಿಥಿಯಾಗಿದ್ದ ವಿಧಾನ ಪರಿಷತ್ ಸದಸ್ಯ ಬಿಜೆಪಿಯ ಅರುಣ ಶಹಾಪೂರ ಅವರು ಮಾತನಾಡುತ್ತ ಇನ್ನೂ 6 ಸಚಿವರ ಸ್ಥಾನ ಖಾಲಿ ಇದೆ. ಸಚಿವ ಸಂಪುಟ ರಚನೆಯಾದ ಮೇಲೆ ಪಕ್ಷ 6 ಸ್ಥಾನ ಖಾಲಿ ಉಳಿಸಿಕೊಂಡು ಯಾರಿಗೆ ಕೊಡಬೇಕು ಅನ್ನೋ ಮೌಲ್ಯಮಾಪನ ಮಾಡುತ್ತಿದೆ. ಈ ಬಾರಿ ವಿಜಯಪುರ ಜಿಲ್ಲೆಗೂ ಮಂತ್ರಿ ಸ್ಥಾನ ಸಿಗುತ್ತದೆ. ಆ ಸ್ಥಾನ ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದ ಶಾಸಕರಾದ ಎ.ಎಸ್.ಪಾಟೀಲ ನಡಹಳ್ಳಿಯವರಿಗೆ ಸಿಕ್ಕರೆ ಸಂತೋಷ ಪಡುವವರಲ್ಲಿ ನಾನು ಮೊದಲಿಗನಾಗಿರುತ್ತೇನೆ ಎನ್ನುವುದನ್ನು ಬಹಿರಂಗವಾಗಿ ಹೇಳ್ತೇನೆ ಎಂದು ಜಿಲ್ಲೆಯ ಬಿಜೆಪಿ ರಾಜಕಾರಣದ ಅಂತರ್ಯ ಬಿಡಿಸಿಟ್ಟರು.

ಜಿಲ್ಲೆಯಲ್ಲಿ ನೀವು ನಿಮ್ಮ ಗಟ್ಟಿ ನೇತೃತ್ವವನ್ನು ಮುಂದುವರೆಸಿಕೊಂಡು ಹೋಗಬೇಕು. ಜಿಲ್ಲೆಗೆ ಯಾಕೆ ಮಂತ್ರಿ ಸ್ಥಾನ ಬೇಕು ಎಂದರೆ ನಡಹಳ್ಳಿಯವರು ಮಂತ್ರಿ ಆಗಬೇಕಂತಲ್ಲ, ಈ ಜಿಲ್ಲೆ ಅಭಿವೃದ್ದಿ ಆಗಬೇಕು ಅನ್ನೋ ಕಳಕಳಿಯಿಂದ ಈ ಮಾತನ್ನು ಹೇಳುತ್ತಿದ್ದೇನೆ. ಮುದ್ದೇಬಿಹಾಳದಲ್ಲಿ ಅಭಿವೃಧ್ದಿಯ ಹೊಸ ಶಕೆ ಆರಂಭವಾಗಿದೆ. ಇದು ಮುಂದುವರೆಯಬೇಕು, ಜಿಲ್ಲೆಗೂ ವಿಸ್ತರಿಸಬೇಕು ಅನ್ನೋ ಹಾರೈಕೆ ನನ್ನದು. ನೀವು ಮುನ್ನಡೆಯಿರಿ ನಿಮ್ಮ ಜೊತೆಗೆ ನಾವಿದ್ದೇವೆ. ಮುದ್ದೇಬಿಹಾಳದಲ್ಲಿ ಕಣ್ಣು ಮುಚ್ಚಿ ಕಣ್ತೆರೆಯೋದರೊಳಗೆ ಬಂದು ನೀವು ಹೇಗೆ ಎಂಎಲ್‍ಎ ಆದಿರೋ ಹಾಗೇ ಮಂತ್ರಿ ಕೂಡಾ ಆಗಬೇಕು. ನಡಹಳ್ಳಿಯವರು ಕೂಡಾ ಎಬಿವಿಪಿಯಲ್ಲಿದ್ದು ಹೋರಾಟ ಮಾಡಿದವರಾಗಿದ್ದಾರೆ.

ನಡಹಳ್ಳಿಯವರು ಬೆಳೆಯಬೇಕಾದರೆ ಧಾರವಾಡದಲ್ಲಿ ಅವರು ಶಿಕ್ಷಣ ಪಡೆಯುವಾಗ ಎಬಿವಿಪಿಯಲ್ಲಿನ ಹೋರಾಟವೂ ಕಾರಣವಾಗಿದೆ. ನಡಹಳ್ಳಿಯವರ ಪಲ್ಲಕ್ಕಿ ಹೊರಲೂ ನಾನು ಸಿದ್ದ ಎಂದು ಹುರಿದುಂಬಿಸಿದರು.

ಇದನ್ನೂ ಓದಿ:ಕಾಮಸಮುದ್ರ ರಸ್ತೆಯಲ್ಲಿ ಗುಂಡಿ ಗಂಡಾಂತರ

Advertisement

ಇದಕ್ಕೆ ಬಹಿರಂಗವಾಗಿಯೇ ಪ್ರತಿಕ್ರಿಯಿಸಿದ ಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ನಡಹಳ್ಳಿಯವರು, ನಾನು ಕಾಂಗ್ರೆಸ್‍ನಲ್ಲಿದ್ದರೂ (2008, 2013ರಲ್ಲಿ ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಾಗಿದ್ದರು) ಶಿಕ್ಷಕರ ಮತಕ್ಷೇತ್ರದಿಂದ ಪರಿಷತ್‍ಗೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಅರುಣ ಶಹಾಪೂರಗೆ ಸಹಾಯ ಮಾಡಿದ್ದೆ. ಅದನ್ನು ಇವತ್ತು ಬಹಿರಂಗಪಡಿಸುತ್ತಿದ್ದೇನೆ.

ಎಬಿವಿಪಿಯ ಸಂಬಂಧ ನಮ್ಮಿಬ್ಬರದು. ಜಿಲ್ಲೆಗೆ ಮಂತ್ರಿ ಸ್ಥಾನ ಸಿಗಬೇಕು ಅನ್ನೋದು ಜಿಲ್ಲೆಯ ಜನರ ಮತ್ತು ಪಕ್ಷದ ಕಾರ್ಯಕರ್ತರ ಅಪೇಕ್ಷೆಯಾಗಿದೆ. ಈ ಅಪೇಕ್ಷೆಯನ್ನು ಜಿಲ್ಲೆಯ ಹಿರಿಯರಾದ ರಮೇಶ ಜಿಗಜಿಣಗಿ ಅವರ ನೇತೃತ್ವದಲ್ಲಿ ಮಾಜಿ ಮಂತ್ರಿಗಳ, ಮಾಜಿ ಶಾಸಕರ ಸಹಕಾರದೊಂದಿಗೆ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ. ಮುಖ್ಯಮಂತ್ರಿಗಳು ನಮ್ಮ ಜಿಲ್ಲೆಗೆ ಪ್ರಾತಿನಿಧ್ಯ ಕೊಡುವ ವಿಶ್ವಾಸ ಇದೆ ಎಂದು ತಮ್ಮ ಮನದಾಳದ ಮಾತನ್ನು ಹೊರಗೆಡವಿದರು.

Advertisement

Udayavani is now on Telegram. Click here to join our channel and stay updated with the latest news.

Next