Advertisement

Vijayapura; ದಲಿತರ ಮನೆಗೆ ತೆರಳಿ ಅಯೋಧ್ಯಾ ಶ್ರೀರಾಮ ಮಂತ್ರಾಕ್ಷತೆ ವಿತರಿಸಿದ ಪೇಜಾವರಶ್ರೀ

01:24 PM Jan 04, 2024 | keerthan |

ವಿಜಯಪುರ: ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ಗುರುವಾರ ನಗರದಲ್ಲಿ ದಲಿತ ನಾಯಕ, ಮಹಾನಗರ ಪಾಲಿಕೆ ಮಾಜಿ ಉಪ ಮೇಯರ್ ಗೋಪಾಲ ಘಟಕಾಂಬಳೆ ಮನೆಗೆ ತೆರಳಿ ಅಯೋಧ್ಯಾ ಶ್ರೀರಾಮ ಮಂತ್ರಾಕ್ಷತೆ ವಿತರಿಸಿದರು.

Advertisement

ನಗರದ ರಾಣೀಬಗೀಚ್ ಪ್ರದೇಶದಲ್ಲಿರುವ ಬಿಜೆಪಿ ಎಸ್ಸಿ ಮೋರ್ಚಾ ಘಟಕದ ಜಿಲ್ಲಾಧ್ಯಕ್ಷ  ಗೋಪಾಲ ಘಟಕಾಂಬಳೆ ಮನೆಗೆ ತೆರಳಿದ ಪೇಜಾವರ ಶ್ರೀಪಾದರು ಅಯೋಧ್ಯಾದಿಂದ ಬಂದಿರುವ ಮಂತ್ರಾಕ್ಷತೆ, ಅಯೋಧ್ಯಾ ಶ್ರೀರಾಮ ಮಂದಿರದ ಚಿತ್ರವಿರುವ ಕರಪತ್ರ, ಪ್ರಸಾದ ವಿವರಿಸಿದರು.

ಬಳಿಕ ರಾಣಿಬಗೀಚ್ ಪ್ರದೇಶದ ದಲಿತರ ಮನೆಗಳಿಗೆ ತೆರಳಿ ಮಂತ್ರಾಕ್ಷತೆ ವಿತರಿಸಿ, ಜ.22 ರಂದು ರಾಮ ಮಂದಿರ ಲೋಕಾರ್ಪಣೆ ಸಂದರ್ಭದಲ್ಲಿ ಭಕ್ತರು ಪೂಜೆ ಸಲ್ಲಿಸಿ ಎಂದು ಸಂದೇಶ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next