Advertisement

Vijayapura; ಚಕ್ರದಲ್ಲಿ ಕಾಣಿಕೊಂಡ ಬೆಂಕಿಗೆ ಲಾರಿ ಭಸ್ಮ:ಚಾಲಕ, ಕ್ಲೀನರ್ ಪಾರು

11:28 PM Feb 15, 2024 | Vishnudas Patil |

ವಿಜಯಪುರ : ಚಲಿಸುತ್ತಿದ್ದ ಲಾರಿಯ ಚಕ್ರದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಲಾರಿ ಸಂಪೂರ್ಣ ಸುಟ್ಟು ಕರಕಲಾದ ಘಟನೆ ಇಂಡಿ ತಾಲೂಕಿನ ಹಲಗುಣಕಿ ಬಳಿ ರಾಷ್ಟ್ರೀಯ ಹೆದ್ದಾರಿ-52 ರಲ್ಲಿ ಜರುಗಿದೆ.

Advertisement

ತಮಿಳುನಾಡು ನೊಂದಣಿ ಹೊಂದಿದ್ದ ಲಾರಿ ಅನಿರೀಕ್ಷಿತ ಬೆಂಕಿಯಿಂದ ಸುಟ್ಟು ಕರಕಲಾಗಿದೆ. ರಾಜಸ್ಥಾನದಿಂದ ಬೆಂಗಳೂರಿಗೆ ಗ್ರಾನೈಟ್ ಕಲ್ಲುಗಳನ್ನು ಸಾಗಿಸುತ್ತಿದ್ದ ಲಾರಿ ಹಲಗುಣಕಿ ಬಳಿ ಬರುತ್ತಲೇ ಏಕಾಏಕಿ ಚಕ್ರದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಾಣಿಸಿಕೊಳ್ಳುತ್ತಲೇ ಚಾಲಕ, ಕ್ಲೀನರ್ ಇಬ್ಬರು ಲಾರಿಯಿಂದ ಕೆಳಗಿಳಿದು ಅಪಾಯದಿಂದ ಪಾರಾಗಿದ್ದಾರೆ.

ಚಾಲಕ, ಕ್ಲೀನರ್ ಕೆಳಗೆ ಇಳಿಯುವ ಹೊತ್ತಿಗೆ ಬೆಂಕಿ ವೇಗವಾಗಿ ಇಡೀ ಲಾರಿಗೆ ವ್ಯಾಪಿಸಿಕೊಂಡು ಲಾರಿ ಸಂಪೂರ್ಣ ಸುಟ್ಟು ಕರಕಲಾಗಿದೆ.

ವಿಷಯ ತಿಳಿದ ಕೂಡಲೇ ಅಗ್ನಿಶಾಮಕ ಸಿಬಂದಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. ಹೊರ್ತಿ ಪೊಲೀಸರು ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next