Advertisement

ವಿಜಯಪುರ: ಸಾಲಭಾದೆಗೆ ಹೆದರಿ ಆತ್ಮಹತ್ಯೆಗೆ ಶರಣಾದ ರೈತ

09:59 AM Feb 04, 2020 | keerthan |

ವಿಜಯಪುರ: ಸಾಲಭಾದೆಗೆ ಹೆದರಿ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡರುವ ಘಟನೆ ಸಿಂದಗಿ ತಾಲೂಕಿನ ಡವಳಾರ ಗ್ರಾಮದಲ್ಲಿ ಜರುಗಿದೆ.

Advertisement

ರೈತ ಚಂದ್ರಶೇಖರ ಹೊಸಮನಿ (38) ಅವರು ಡವಳಾರ ಗ್ರಾಮದಲ್ಲಿ ತನ್ನ‌ ಜಮೀನಿನಲ್ಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಚಂದ್ರಶೇಖರ ಹೊಸಮನಿ ಅವರು ಒಂದು ಬ್ಯಾಂಕ್ ನಲ್ಲಿ ಮತ್ತು ಖಾಸಗಿಯಾಗಿ ಸಾಲ ಮಾಡಿದ್ದರು. ಕಳೆದ 2019ರ ನವೆಂಬರ್ ನಲ್ಲಿ ಚಂದ್ರಶೇಖರ್ ಗೆ ಸಾಲ ಮರು ಪಾವತಿ ಮಾಡುವಂತೆ ಬ್ಯಾಂಕ್ ನೋಟಿಸ್ ನೀಡಿತ್ತು ಎನ್ನಲಾಗಿದೆ.

ಇದರಿಂದ ನೊಂದಿದ್ದ ರೈತ ಸಾಲ ಮರುಪಾವತಿ ಮಾಡಲಾಗದೆ ತನ್ನದೇ ಜಮೀನಿನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಕಲಕೇರಿ ಪೊಲೀಸ್ ಠಾಣಾ ವ್ಯಾಪ್ತಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next