Advertisement

Vijayapura: ಸುಗಂಧರಾಜ ಹೂವಿನ ಹಾರವನ್ನು ತಿರಸ್ಕರಿಸಿದ ಡಿಕೆಶಿ!

06:46 PM Feb 03, 2024 | Vishnudas Patil |
ವಿಜಯಪುರ : ಜಿಲ್ಲೆಯ ಮನಗೂಳಿ ಪಟ್ಟಣದಲ್ಲಿ ನಡೆದ ಧಾರ್ಮಿಕ ಸಮಾರಂಭದಲ್ಲಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಸುಗಂಧರಾಜ ಹೂವಿನ ಹಾರ ಹಾಕಲು ಬಂದಾಗ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನಯವಾಗಿ ತಿರಸ್ಕರಿಸಿದ ಘಟನೆ ನಡೆಯಿತು.
ಶನಿವಾರ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಸಂಸ್ಥಾನ ಹಿರೇಮಠದ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಆಗಮಿಸಿದ್ದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ ಅಭಿಮಾನಿಗಳು ಸುಗಂಧರಾಜ ಹೂವಿನ ಹಾರ ಹಾಕಲು ಮುಂದಾಗಿದ್ದರು. ಇದನ್ನು ಕಂಡೊಡನೆಯೇ ಇಲ್ಲಿಂದ ಕೊಂಡೊಯ್ಯಿರಿ ಇದನ್ನು ಎಂದು ಸೂಚಿಸಿದರು.
ಡಿ.ಕೆ.ಶಿವಕುಮಾರ ಪಾಲ್ಗೊಳ್ಳುವ ಸಮಾರಂಭದಲ್ಲಿ ಸುಗಂಧರಾಜ ಹೂವಿನ ಹಾರ ತರದಂತೆ ಮೊದಲೇ ಸೂಚಿಸಲಾಗಿತ್ತು. ಆದರೂ ಅಭಿಮಾನಿಗಳು ಸುಗಂಧರಾಜ ಪುಷ್ಟಹಾರವನ್ನೇ ತಂದಿದ್ದು, ನಿರಾಕರಿಸಿದ ಬಳಿಕ ಅಭಿಮಾನಿಗಳು ಅದನ್ನು ಮರಳಿ ಒಯ್ದರು. ಇದಲ್ಲದೇ ಉಪ ಮುಖ್ಯಮಂತ್ರಿಗಳು ಸೂಚಿಸುತ್ತಲೇ ಅವರ ಟಿಪಾಯಿ ಮೇಲಿದ್ದ ಸುಗಂಧರಾಜ ಪುಷ್ಟ ಹಾರವನ್ನು ಸ್ಥಳದಲ್ಲಿದ್ದ ಅಧಿಕಾರಿಗಳು ತೆರವುಗೋಳಿಸಿದರು.
Advertisement

Udayavani is now on Telegram. Click here to join our channel and stay updated with the latest news.

Next