Advertisement

Vijayapura: ಸ್ಟೇಷನ್ ಬೇಲ್ ನೀಡಲು ಲಂಚ: ಇಬ್ಬರು ಕಾನ್‌ ಸ್ಟೇಬಲ್‌ ಲೋಕಾಯುಕ್ತ ಬಲೆಗೆ

10:10 AM Jul 24, 2024 | Kavyashree |

ವಿಜಯಪುರ: ಗಲಾಟೆ ಪ್ರಕರಣದಲ್ಲಿ ಸ್ಟೇಷನ್ ಬೇಲ್ ನೀಡುವ ವಿಷಯದಲ್ಲಿ ಲಂಚ ಪಡೆದ ಇಬ್ಬರು ಪೊಲೀಸ್ ಕಾನ್‌ ಸ್ಟೇಬಲ್‌ ಗಳನ್ನು ಲೋಕಾಯುಕ್ತ ಪೊಲೀಸರು ಸೆರೆ ಹಿಡಿದಿದ್ದಾರೆ.

Advertisement

ನಗರದ ಗೋಲಗುಂಬಜ ಠಾಣೆ ಪೇದೆಗಳಾದ ಜಟ್ಟೆಪ್ಪ ಬಿರಾದಾರ ಹಾಗೂ ಹನುಮಂತ ಪೂಜಾರಿ ಎಂಬ ಪೊಲೀಸ್ ಕಾನ್‌ ಸ್ಟೇಬಲ್‌ ಗಳು ಲಂಚ ಪಡೆದು ಲೋಕಾಯುಕ್ತರಿಂದ ಬಂಧಿಸಲ್ಪಟ್ಟವರು.

ಪ್ರಕರಣವೊಂದರಲ್ಲಿ ಜಗಳ ಮಾಡಿಕೊಂಡಿದ್ದ ಆರೋಪಿಗಳನ್ನು ಠಾಣಾ ಜಾಮೀನಿನ ಮೇಲೆ ಬಿಡಲು ಕಾನ್‌ ಸ್ಟೇಬಲ್‌ ಗಳಾದ ಜಟ್ಟೆಪ್ಪ ಹಾಗೂ ಹನುಮಂತ 50 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದರು.

ಲಂಚ ಕೊಡಲು ಒಪ್ಪದ ದೂರುದಾರರು ಲೋಕಾಯುಕ್ತರಿಗೆ ದೂರು ನೀಡಿದ್ದರು. ಇದರಲ್ಲಿ 40 ಸಾವಿರ ರೂ. ಲಂಚ ಪಡೆಯುವಾಗ ಲಂಚ ಪಡೆದ ಪೊಲೀಸರನ್ನು ಬುಧವಾರ ಬಂಧಿಸಲಾಗಿದೆ.

ವಿಜಯಪುರ ಲೋಕಾಯುಕ್ತ ಎಸ್ಪಿ ಟಿ.ಮಲ್ಲೇಶ, ಡಿಎಸ್ಪಿ ಸುರೇಶರೆಡ್ಡಿ, ಸಿಪಿಐ ಆನಂದ ಠಕ್ಕನವರ, ಎ.ಎ.ಡೋಣಿ ನೇತೃತ್ವದಲ್ಲಿ ದಾಳಿ ನಡೆಸಿದ ಲೋಕಾಯುಕ್ತರು ಇಬ್ಬರೂ ಕಾನ್‌ ಸ್ಟೇಬಲ್‌ಗಳನ್ನು ಬಂಧಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next