Advertisement

ವಿಜಯನಗರ ಜಿಲ್ಲೆ ಘೋಷಣೆಗೆ ವಿಜಯೋತ್ಸವ

03:53 PM Feb 10, 2021 | Team Udayavani |

ಹೊಸಪೇಟೆ: ನೂತನ ವಿಜಯನಗರ ಜಿಲ್ಲೆ ಅಂತಿಮ ಆದೇಶದ ಹಿನ್ನೆಲೆಯಲ್ಲಿ ತಾಲೂಕು ವಕೀಲರ ಸಂಘದ ನೇತೃತ್ವದಲ್ಲಿ ವಕೀಲರು ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು. ವಕೀಲರ ಸಂಘದ ಮುಂಭಾಗದಲ್ಲಿ ಕೇಕ್‌ ಕತ್ತರಿಸಿ, ಪರಸ್ಪರ ಸಿಹಿ ಹಂಚಿ ವಿಜಯೋತ್ಸವ ಆಚರಣೆ ಮಾಡಿದರು.

Advertisement

ವಕೀಲರ ಸಂಘದ ಅಧ್ಯಕ್ಷ ತಾರಿಹಳ್ಳಿ ಹನುಮಂತಪ್ಪ, ಕೋಟ್ರಗೌಡ, ಕಲ್ಲಂಭಟ್ಟ, ನೀಲಕಂಠ ಸ್ವಾಮಿ, ಕೆ.ರಾಮಪ್ಪ, ಪಿ.ಶ್ರೀನಿವಾಸ ಮೂರ್ತಿ, ಕೆ.ವಿ.ಬಸವರಾಜ, ಮಂಜುನಾಥ್‌, ಮುಂಡಾಸದ ಸುರೇಶ್‌, ಪಿ.ವಿ.ವೆಂಕಟೇಶ್‌, ತಾರಿಹಳ್ಳಿ ವೆಂಕಟೇಶ್‌, ಸದಾನಂದ, ಮರಿಸ್ವಾಮಿ, ತಿಪ್ಪೇಸ್ವಾಮಿ, ಹಿರಿಯ ಮುಖಂಡರಾದ ಕೆ. ರತ್ನಾಕರ್‌ ರಾವ್‌, ಪಿ. ಚಂದ್ರಶೇಖರ್‌ ಯಲಗೋಡ, ಜಿ.ವೀರಭಧ್ರಪ್ಪ, ಎಚ್‌.ಭಗವಾನ್‌,  ಕೆ. ಪ್ರಹಲ್ಲಾದ್‌, ಮುಖಂಡರಾದ ನಿಂಬಗಲ್‌ ರಾಮಕೃಷ್ಣ, ವಿಶ್ವನಾಥ್‌ ಕೌತಾಳ್‌, ಎಚ್‌.ಎಲ್‌. ಕೋಟ್ರೇಶ್‌,  ಮಹಿಳಾ ವಕೀಲರಾದ ಶ್ರೀಮಂತ ಶ್ವೇತಾಂಬರಿ, ಪುಷ್ಪಲತಾ, ಭಾರತಿ, ಪಾರ್ವತಿ, ಸುನಂದಾ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next