Advertisement

Darshan; ವಿಜಯಲಕ್ಷ್ಮೀ ಪೋಸ್ಟ್‌ ವೈರಲ್: ದರ್ಶನ್‌ ಬಿಡುಗಡೆಯ ಸೂಚನೆ?

11:11 AM Oct 13, 2024 | Team Udayavani |

ಸ್ಟಾರ್‌ ನಟರ ಹಳೇ ಸಿನಿಮಾಗಳ ಬಿಡುಗಡೆಯ ಪರ್ವ ಮತ್ತೆ ಮುಂದುವರೆದಿದೆ. ಈ ಬಾರಿ ನಟ ದರ್ಶನ್‌ ಅವರ ಸರಣಿ. ಅವರು ಅಭಿನಯಿಸಿರುವ “ನವಗ್ರಹ’ ಚಲನಚಿತ್ರ ಮತ್ತೆ ಚಿತ್ರಮಂದಿರಗಳಲ್ಲಿ ಶೀಘ್ರ ಬಿಡುಗಡೆಗೊಳ್ಳಲಿದೆ.

Advertisement

ದರ್ಶನ್‌ ಅವರ ಪತ್ನಿ ವಿಜಯಲಕ್ಷ್ಮೀ ಈ ಕುರಿತು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಚಿತ್ರ ಬಿಡುಗಡೆಗೂ, ರೇಣುಕಾಸ್ವಾಮಿ ಕೊಲೆ ಆರೋಪದ ಮೇಲೆ ಬಂಧನದಲ್ಲಿರುವ ದರ್ಶನ್‌ ಅವರ ಬಿಡುಗಡೆಗೂ ಸಂಬಂಧವಿರಬಹುದು ಎಂದು ಮಾತು ಕೇಳಿಬರುತ್ತಿವೆ.

“ನಿಮ್ಮೆಲ್ಲರ ಹೃದಯದಲ್ಲಿ ಅಚ್ಚಳಿಯದೆ ಉಳಿದ ಚಿತ್ರ ನವಗ್ರಹ ಅತೀ ಶೀಘ್ರದಲ್ಲಿ ರೀ ರಿಲೀಸ್‌ ಆಗಲಿದೆ. ಇದು ಮೊದಲಿಗಿಂತ ಜಾಸ್ತಿ ಸ್ಪೆಷಲ್‌ ಆಗಿರಲಿದೆ. ಚಾಮುಂಡೇಶ್ವರಿ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ’ ಎಂದು ವಿಜಯಲಕ್ಷ್ಮೀ ಇನ್‌ ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ದರ್ಶನ್‌ ಬಂಧನದಿಂದ ಸ್ಥಗಿತಗೊಂಡಿದ್ದ “ಡೆವಿಲ್‌’ ಚಿತ್ರ ತಂಡವೂ ದಸರಾ ಹಬ್ಬದ ಶುಭಾಶಯ ಪೋಸ್ಟರ್‌ ಹಂಚಿಕೊಂಡಿದೆ. ಸದ್ಯ ಜೈಲಿನಿಂದ ದರ್ಶನ್‌ ಅವರಿಗೆ ಜಾಮೀನು ಸಿಗಬಹುದೆಂದು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ. ಇದೇ ಸಮಯಕ್ಕೆ ದಸರಾ ಕುರಿತಂತೆ ಇರುವ “ನವಗ್ರಹ’ ಸಿನಿಮಾ ರೀ ರಿಲೀಸ್‌ ಆಗುತ್ತಿರುವುದು ಹಲವು ಕುತೂಹಲ ಸೃಷ್ಟಿಸಿದೆ. ವಿಜಲಯಕ್ಷ್ಮೀ ಅವರ ಈ ಪೋಸ್ಟ್‌ ದರ್ಶನ್‌ ಬಿಡುಗಡೆಯ ಸೂಚನೆ ಎಂಬಂತೆ ಜಾಲತಾಣಗಳಲ್ಲಿ ಬಿಂಬಿತವಾಗಿದೆ.

Advertisement

ದಿನಕರ್‌ ತುಗೂದೀಪ್‌ ನಿರ್ದೇಶನದ “ನವಗ್ರಹ’ ಚಿತ್ರ 2008ರಲ್ಲಿ ತೆರೆ ಕಂಡು, ಮೆಚ್ಚುಗೆ ಗಳಿಸಿತ್ತು. ಕನ್ನಡ ಚಿತ್ರರಂಗದ ಖಳನಟರ ಮಕ್ಕಳು ನವಗ್ರಹ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಇದರ ವಿಶೇಷತೆ.

Advertisement

Udayavani is now on Telegram. Click here to join our channel and stay updated with the latest news.

Next