Advertisement

Darshan; ಡಿ ಬಾಸ್‌ಗೆ ಯಾರೂ ಏನು ಮಾಡೋಕೆ ಆಗಲ್ಲ: ದಿನಕರ್‌ ತೂಗುದೀಪ

11:10 AM Oct 07, 2024 | Team Udayavani |

ಸಹೋದರ ದರ್ಶನ್‌ ಅವರ ಕೇಸ್‌ ವಿಚಾರವಾಗಿ ದಿನಕರ್‌ ತೂಗುದೀಪ ಕೂಡಾ ಓಡಾಡುತ್ತಿದ್ದಾರೆ. ಈಗಾಗಲೇ ಹಲವು ಬಾರಿ ಜೈಲಿಗೆ ಭೇಟಿ ಕೂಡಾ ನೀಡಿದ್ದಾರೆ. ಆದರೆ, ಇಷ್ಟು ದಿನ ಪ್ರಕರಣದ ಕುರಿತಾಗಿ ಎಲ್ಲೂ ಮಾತನಾಡಿರಲಿಲ್ಲ. ಆದರೆ, ಈಗ ಮೊದಲ ಬಾರಿ ದರ್ಶನ್‌ ಬಗ್ಗೆ ಮಾತನಾಡಿದ್ದಾರೆ. ದಿನಕರ್‌ ನಿರ್ದೇಶನದ “ರಾಯಲ್‌’ ಚಿತ್ರದ ಹಾಡು ಬಿಡುಗಡೆ ವೇಳೆ ದಿನಕರ್‌ ಮಾತನಾಡಿದ್ದಾರೆ.

Advertisement

“ಸೆಲೆಬ್ರೆಟಿಗಳ (ಅಭಿಮಾನಿಗಳ) ಆಶೀರ್ವಾದ ಇರುವವರೆಗೆ ಡಿ ಬಾಸ್‌ನ ಯಾರೂ ಏನೂ ಮಾಡೋಕ್ಕಾಗಲ್ಲ’ ಎಂದಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಜೋಶ್‌ ತುಂಬಿದ್ದಾರೆ.

“ಇಷ್ಟು ದಿನ ನಾನು ಎಲ್ಲಿಯೂ ಹೋಗಲಾಗಿರಲಿಲ್ಲ, ಎಲ್ಲಿಯೂ, ಯಾವುದರ ಬಗ್ಗೆಯೂ ಮಾತನಾಡಲು ಸಹ ಆಗಿರಲಿಲ್ಲ. ಆದರೆ ಈ ವೇದಿಕೆ ಬಳಸಿಕೊಂಡು ಕೆಲವು ಮಾತು ಆಡುತ್ತೇನೆ. ನಮ್ಮ ಕಷ್ಟದ ಸಮಯದಲ್ಲಿ ನಮಗೆ ಬೆಂಬಲ ನೀಡುತ್ತಿರುವ, ನಮ್ಮ ಬೆನ್ನಿಗೆ ನಿಂತರುವ ಎಲ್ಲರಿಗೂ ಧನ್ಯವಾದ. ನಿಮ್ಮ ಈ ಪ್ರೀತಿ, ಪ್ರೋತ್ಸಾಹ ಹೀಗೆಯೇ ಇರಲಿ. ನಿಮ್ಮ ಪ್ರೀತಿಗೆ ಚಿರಋಣಿಯಾಗಿರುತ್ತೀವಿ. ಎಲ್ಲರಿಗೂ ಗೊತ್ತಿರುವಂತೆ ಪರಿಸ್ಥಿತಿ ಸರಿ ಇರಲಿಲ್ಲ, ಆದರೆ ಇಂಥಹಾ ಸಮಯದಲ್ಲಿ ಸೆಲೆಬ್ರೆಟಿಗಳು ಬೆಂಬಲ ನೀಡಿದ್ದಾರೆ. ಅವರಿಗೆ ಧನ್ಯವಾದ. ನಾವು ಹೆಸರು ಮಾಡಿರುವುದಕ್ಕೆ ಡಿ ಬಾಸ್‌ ಅಭಿಮಾನಿಗಳು, ಸಿನಿಮಾ ಪ್ರೇಮಿಗಳು ಕಾರಣ. ನಿಮ್ಮ ಈ ಪ್ರೀತಿ ದರ್ಶನ್‌ ಮೇಲೆ ಕುಟುಂಬದ ಮೇಲೆ ಹೀಗೆಯೇ ಇರಲಿ, ನಿಮ್ಮ ಪ್ರೀತಿ ಇರುವವರೆಗೆ ಡಿ ಬಾಸ್‌ಗೆ ಯಾರೂ ಏನು ಮಾಡೋಕೆ ಆಗಲ್ಲ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next