Advertisement

ವಿಜಯ್‌ ಹಜಾರೆ: ಕರ್ನಾಟಕ-ಹೈದರಾಬಾದ್‌ ಮುಖಾಮುಖೀ

06:55 AM Feb 18, 2018 | Team Udayavani |

ಬೆಂಗಳೂರು: ವಿಜಯ್‌ ಹಜಾರೆ ಏಕದಿನ ಕ್ರಿಕೆಟ್‌ ಕೂಟದ ಲೀಗ್‌ ಹಂತದ ಪಂದ್ಯಗಳನ್ನು ಯಶಸ್ವಿಯಾಗಿ ಬೆಂಗಳೂರಿನಲ್ಲಿ ಪೂರೈಸಿರುವ ಕರ್ನಾಟಕ ತಂಡ ಈಗ ಕ್ವಾರ್ಟರ್‌ ಫೈನಲ್‌ ಹಣಾಹಣಿಗೆ ಸಜ್ಜಾಗಿದೆ. ಇಲ್ಲಿ ಕರ್ನಾಟಕ ತಂಡ ಹೈದರಾಬಾದ್‌ ವಿರುದ್ಧ ಸೆಣಸಲಿದೆ. ಫೆ. 21ರಂದು ಹೊಸದಿಲ್ಲಿಯ ಫಿರೋಜ್‌ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ.

Advertisement

ನಾಯಕ ವಿನಯ್‌ ಕುಮಾರ್‌ ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ರೈಲ್ವೇಸ್‌ ವಿರುದ್ಧ ಆಡಿರಲಿಲ್ಲ. ಗಾಯದ ಕಾರಣದಿಂದ ತಂಡದಿಂದ ಹೊರ ಬಿದ್ದಿದ್ದರು. ಅವರು ಇನ್ನೂ ಚೇತರಿಸಿಕೊಂಡಿಲ್ಲ. ಹೀಗಾಗಿ ಕ್ವಾರ್ಟರ್‌ಫೈನಲ್‌ ಪಂದ್ಯಕ್ಕೂ ಅವರು ಲಭ್ಯವಿರುವುದಿಲ್ಲ. ಇವರ ಬದಲಿಗೆ ತಂಡವನ್ನು ಕರುಣ್‌ ನಾಯರ್‌ ಮುನ್ನಡೆಸಲಿದ್ದಾರೆ. ವೇಗಿ ಅಭಿಮನ್ಯು ಮಿಥುನ್‌ ಕೂಡ ತಂಡದಿಂದ ಹೊರಬಿದ್ದಿದ್ದಾರೆ.

ಇಬ್ಬರು ಹೊರಬಿದ್ದರೆ ಮೂವರು ತಂಡದ ಒಳಕ್ಕೆ ಬಂದಿರುವುದು ಕರ್ನಾಟಕ ಪಾಲಿಗೆ ಸಮಾಧಾನದ ಸಂಗತಿ. ಇವರೆಂದರೆ ಎಸ್‌.ಅರವಿಂದ್‌, ಸ್ಟುವರ್ಟ್‌ ಬಿನ್ನಿ ಮತ್ತು ಸಿ.ಎಂ.ಗೌತಮ್‌.

ಕರ್ನಾಟಕ ತಂಡ: ಕರುಣ್‌ ನಾಯರ್‌ (ನಾಯಕ), ಮಾಯಾಂಕ್‌ ಅಗರ್ವಾಲ್‌, ಆರ್‌. ಸಮರ್ಥ್. ಸ್ಟುವರ್ಟ್‌ ಬಿನ್ನಿ, ಸಿ.ಎಂ. ಗೌತಮ್‌, ಪವನ್‌ ದೇಶಪಾಂಡೆ, ಕೆ. ಗೌತಮ್‌, ಶ್ರೇಯಸ್‌ ಗೋಪಾಲ್‌, ಪ್ರಸಿದ್ಧ್ ಕೃಷ್ಣ, ಎಸ್‌. ಅರವಿಂದ್‌, ರೋನಿತ್‌ ಮೋರೆ, ಟಿ. ಪ್ರದೀಪ್‌, ದೇವದತ್‌ ಪಡೀಕಲ್‌, ಬಿ.ಆರ್‌. ಶರತ್‌.

Advertisement

Udayavani is now on Telegram. Click here to join our channel and stay updated with the latest news.

Next