Advertisement

ವಿದ್ವಾಂಸ ಉಮಾಕಾಂತ ಭಟ್ ಕೆರೇಕೈ ರಿಗೆ‌ ವಿದ್ಯಾವಾಚಸ್ಪತಿ ಪದವಿ

07:18 PM Jun 30, 2022 | Team Udayavani |

ಶಿರಸಿ: ಬೆಂಗಳೂರಿ‌ನಲ್ಲಿರುವ ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯ ನೀಡುವ ಪ್ರತಿಷ್ಠಿತ ವಿದ್ಯಾ ವಾಚಸ್ಪತಿ ಪದವಿ (ಡಿ ಲಿಟ್) ನಾಡಿನ ಹೆಸರಾಂತ ವಿದ್ವಾಂಸ ಉಮಾಕಾಂತ ಭಟ್ ಕೆರೇಕೈ ಅವರಿಗ ಪ್ರಕಟವಾಗಿದೆ.

Advertisement

ಬಹುಭಾಷಾ ಪಂಡಿತ, ಪ್ರಸಿದ್ಧ ತಾಳಮದ್ದಲೆ ಅರ್ಥದಾರಿ ಕೆರೇಕೈ ಅವರು ಮೇಲುಕೋಟೆ‌ ಸಂಸ್ಕೃತ‌ ಮಹಾವಿದ್ಯಾಲಯದ ಪ್ರಾಚಾರ್ಯರಾಗಿ ಸೇವೆ‌ ಸಲ್ಲಿಸಿ ನಿವೃತ್ತರಾಗಿದ್ದಾರೆ. ಅನೇಕ ಪತ್ರಿಕೆ ಅಂಕಣಕಾರರಾಗಿ, ಕೃತಿಕಾರರಾಗಿ ಕೂಡ ಪರಿಚಿತರು. ಉಮಾಕಾಂತರು ಸಂಸ್ಕೃತ ಕ್ಷೇತ್ರದಲ್ಲಿ ಸಲ್ಲಿಸಿದ‌ ಅಸಮಾನ್ಯ‌ ಸೇವೆಗೆ ಈ ಪದವಿ ಲಭಿಸಿದೆ.

ಜುಲೈ 9 ರಂದು ಬೆಂಗಳೂರಿನ ರಾಜ ಭವನದಲ್ಲಿ ಉಪರಾಷ್ಟ್ರಪತಿಗಳು ಪದವಿ ಪ್ರದಾನ ಮಾಡಲಿದ್ದಾರೆ ಎಂದು ವಿವಿ ಕುಲಸಚಿವ ಡಾ. ಗಿರೀಶ ಚಂದ್ರ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next