Advertisement

Summer ಬಿಸಿಗಾಳಿ ಆಘಾತ: ಉಷ್ಣಾಂಶ 50 ಡಿಗ್ರಿ.ಸೆ.ಗೆ?

12:13 AM Apr 02, 2024 | Team Udayavani |

ಬೆಂಗಳೂರು: ಬಿಸಿಲ ಝಳಕ್ಕೆ ರಾಜ್ಯದ ಹಲವು ಜಿಲ್ಲೆಗಳು ಹೈರಾಣಾಗಿದ್ದು, ಬಿಸಿ ಗಾಳಿಯ ತೀವ್ರತೆ ಮತ್ತಷ್ಟು ಹೆಚ್ಚಳವಾಗುವುದಾಗಿ ಹವಾ ಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಆಘಾತಕಾರಿ ವಿಚಾರವೆಂದರೆ ಮಂಗಳವಾರದಿಂದ ಶುಕ್ರವಾರದ ವರೆಗೆ ಕರಾವಳಿ ಮತ್ತು ಉತ್ತರ ಒಳನಾಡು ಪ್ರದೇಶಗಳಲ್ಲಿ ತಾಪ ಮಾನ 40ರಿಂದ 50 ಡಿಗ್ರಿ ಸೆ.ಗೆ ತಲುಪಲಿದೆ. ಉತ್ತರ ಒಳನಾಡಿನ ಬಾಗಲಕೋಟೆ, ಕಲಬುರಗಿ, ಕೊಪ್ಪಳ, ಯಾದಗಿರಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಬಿಸಿಗಾಳಿ ಮುಂದುವರಿಯುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Advertisement

ಹವಾಮಾನ ಇಲಾಖೆ ಮುನ್ಸೂಚನೆ
ಮುಂದಿನ 3 ತಿಂಗಳು ಉ. ಕರ್ನಾಟಕ ಸಹಿತ ದೇಶದ ಹಲವು ಭಾಗಗಳಲ್ಲಿ ಬಿಸಿಗಾಳಿ
ಗುಜರಾತ್‌, ಮಹಾರಾಷ್ಟ್ರ, ರಾಜಸ್ಥಾನ, ಒಡಿಶಾ, ಛತ್ತೀಸ್‌ಗಢ, ಆಂಧ್ರದಲ್ಲಿ ಉಷ್ಣ ಅಲೆಯ ಹಾವಳಿ
ಮುಂದಿನ 2 ದಿನಗಳಲ್ಲಿ ಬೆಳಗಾವಿ, ಬೀದರ್‌, ಗದಗ, ಧಾರವಾಡ, ಹಾವೇರಿ, ರಾಯಚೂರಿನ ಹಲವೆಡೆ ತಾಪ ಮಾನ 2-4 ಡಿ.ಸೆ. ಹೆಚ್ಚಳ

Advertisement

Udayavani is now on Telegram. Click here to join our channel and stay updated with the latest news.

Next