Advertisement

ವಿದ್ಯಾಧೀಶ ತೀರ್ಥರಿಂದ ಶೈಲೇಶಗೆ ಅನುಗ್ರಹ ಮಂತ್ರಾಕ್ಷತೆ ಪ್ರದಾನ

11:30 PM May 08, 2019 | Team Udayavani |

ಉಡುಪಿ: ಪಲಿಮಾರು ಮಠದ ಶ್ರೀ ಯೋಗದೀಪಿಕಾ ವಿದ್ಯಾಪೀಠದಲ್ಲಿ ಅಧ್ಯಯನ ಮಾಡಿದ ಕಂಬ್ಲಿಕಟ್ಟ ಶೈಲೇಶ ಉಪಾಧ್ಯಾಯ ವಟುವಿಗೆ ಪ್ರಣವೋಪದೇಶ ಪುರಸ್ಸರ ಸನ್ಯಾಸ ದೀಕ್ಷೆ ನೀಡಿ ಪಲಿಮಾರು ಮಠಕ್ಕೆ ಉತ್ತರಾಧಿಕಾರಿಯಾಗಿ ನಿಯೋಜಿಸಲಿರುವ ಪೂರ್ವಭಾವಿ ಕಾರ್ಯಕ್ರಮ ಬುಧವಾರ ಶ್ರೀಕೃಷ್ಣ ಮಠದಲ್ಲಿ ನಡೆಯಿತು.

Advertisement

ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಶೈಲೇಶ ಉಪಾಧ್ಯಾಯರಿಗೆ ಶಿಷ್ಯ ಸ್ವೀಕಾರದ ಮೊದಲ ಪ್ರಕ್ರಿಯೆಯಾಗಿ ಅನುಗ್ರಹ ಮಂತ್ರಾಕ್ಷತೆ ನೀಡಿದರು. ಕಾರ್ಯಕ್ರಮದ ಶ್ರೇಯಪ್ರಾಪ್ತಿಗಾಗಿ ಗಣಪತಿ ಹವನ, ಬ್ರಹ್ಮಕೂರ್ಚ, ತಿಲಹೋಮ, ಕೂಷ್ಮಾಂಡ ಹೋಮ, ಪವಮಾನ ಹೋಮ, ನವಗ್ರಹ ಹೋಮ, ಸಂಜೀವಿನಿ ಮೃತ್ಯುಂಜಯ ಮೊದಲಾದ ಸರ್ವಪ್ರಾಯಶ್ಚಿತ್ತ ಹೋಮಗಳನ್ನು ನಡೆಸಲಾಯಿತು.

ಇದಕ್ಕೂ ಮುನ್ನ ಶೈಲೇಶ ಅವರು ತಾವು ಅಧ್ಯಯನ ನಡೆಸಿದ ಋಗ್ವೇದ ಮಂಗಲೋತ್ಸವವನ್ನು ನಡೆಸಿದರು. ಈ ಸಂದರ್ಭದಲ್ಲಿ ವಟುವಿನ ಮಾತಾ ಪಿತೃಗಳು ಹಾಗೂ ಕುಟುಂಬಿಕರು ಉಪಸ್ಥಿತರಿದ್ದರು. ಇನ್ನೂ ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ಜರುಗಲಿವೆ.

Advertisement

Udayavani is now on Telegram. Click here to join our channel and stay updated with the latest news.

Next