Advertisement

ವಿಧಾನಪರಿಷತ್‌ನಲ್ಲಿ ಅಹಿತಕರ ಘಟನೆ ಹಿನ್ನೆಲೆ 3 ಸಚಿವರಿಗೆ ನಿರ್ಬಂಧ: ಸಮಿತಿ ಶಿಫಾರಸು

12:00 AM Jan 30, 2021 | Team Udayavani |

ಬೆಂಗಳೂರು: ವಿಧಾನಪರಿಷತ್‌ನಲ್ಲಿ ಡಿ. 15ರಂದು ನಡೆದ ಅಹಿತಕರ ಘಟನೆ ಹಿನ್ನೆಲೆಯಲ್ಲಿ ಮೂವರು ಸಚಿವರ ಸಹಿತ 15 ಮಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಪರಿಷತ್‌ ಕಾರ್ಯದರ್ಶಿ ವಿರುದ್ಧ ಇಲಾಖಾ ವಿಚಾರಣೆಗೆ ವಿಶೇಷ ಮಂಡಳಿ ರಚಿಸಬೇಕು ಎಂದು ಮೇಲ್ಮನೆಯ ಸದನ ಸಮಿತಿ ಶಿಫಾರಸು ಮಾಡಿದೆ.

Advertisement

ಮರಿತಿಬ್ಬೇಗೌಡ ನೇತೃತ್ವದಲ್ಲಿ ಬಿ.ಕೆ. ಹರಿಪ್ರಸಾದ್‌, ಆರ್‌.ಬಿ. ತಿಮ್ಮಾಪುರ ಅವರನ್ನು ಒಳಗೊಂಡ ಸದನ ಸಮಿತಿ 84 ಪುಟಗಳ ಮಧ್ಯಂತರ ವರದಿಯನ್ನು ಸಿ.ಡಿ. ಸಹಿತ ಸದನಕ್ಕೆ ಶುಕ್ರವಾರ ಸಲ್ಲಿಸಿತು.

ಕಾರ್ಯದರ್ಶಿ ವಿರುದ್ಧವೂ ಕ್ರಮ
ಪರಿಷತ್ತಿನ ಕಾರ್ಯದರ್ಶಿ ಕೆ.ಆರ್‌. ಮಹಾಲಕ್ಷ್ಮೀ ತಮ್ಮ ಜವಾಬ್ದಾರಿ ಮತ್ತು ಕರ್ತವ್ಯ ನಿರ್ವಹಣೆಯಲ್ಲಿ ವಿಫ‌ಲರಾಗಿದ್ದು, ಘಟನೆಯ ಬಗ್ಗೆ ಅಂತಿಮ ವರದಿ ಸಲ್ಲಿಸುವ ವರೆಗೆ ಕಾರ್ಯದರ್ಶಿ ಸ್ಥಾನದಲ್ಲಿ ಕಾರ್ಯನಿರ್ವಹಿಸದಂತೆ ನಿರ್ಬಂಧಿಸಬೇಕು ಎಂದೂ ಹೇಳಿದೆ.

ವರದಿಯಲ್ಲಿ ಏನಿದೆ?
– ಕೋಟ ಶ್ರೀನಿವಾಸ ಪೂಜಾರಿ ಸಹಿತ 3 ಸಚಿವರಿಗೆ ಜವಾಬ್ದಾರಿಯುತ ಹುದ್ದೆ ಬೇಡ.
– ಅಶ್ವತ್ಥನಾರಾಯಣ, ಜೆ.ಸಿ. ಮಾಧುಸ್ವಾಮಿಗೆ 2 ಅಧಿವೇಶನಗಳಿಗೆ ನಿರ್ಬಂಧ ವಿಧಿಸಬೇಕು.
– ಪ್ರಾಣೇಶ್‌, ನಾರಾಯಣಸ್ವಾಮಿ, ಅರುಣ್‌ ಶಹಾಪುರ ಅಸಂಸದೀಯ ನಡವಳಿಕೆ ತೋರಿದ್ದಾರೆ.
– ಹೊರಟ್ಟಿ, ಶ್ರೀಕಂಠೇಗೌಡ, ಆಯನೂರು ಮಂಜು ನಾಥ್‌ರನ್ನು 2 ಅಧಿವೇಶನಕ್ಕೆ ನಿರ್ಬಂಧಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next