Advertisement

ವಿಡಿಯೋ ವೈರಲ್: ನೀರು ತುಂಬಿದ್ದ ಗುಂಡಿಗೆ ಬಿದ್ದ ಬಾಲಕಿಯನ್ನು ರಕ್ಷಿಸಿದ ಯುವಕ

10:00 AM Dec 16, 2019 | keerthan |

ರಾಯಚೂರು: ಖಾಸಗಿ ನಿವೇಶನದಲ್ಲಿದ್ದ ಗುಂಡಿಯಲ್ಲಿ ಆಯತಪ್ಪಿ ಬಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಬಾಲಕಿಯನ್ನು ಯುವಕನೋರ್ವ ರಕ್ಷಣೆ ಮಾಡಿದ ಘಟನೆ ನಗರದಲ್ಲಿ ನಡೆದಿದೆ.

Advertisement

ನಗರದ ಎನ್ ಜಿಒ ರೇಸ್ ಬಚಪನ್ ಶಾಲೆ ಹತ್ತಿರದ ನಿವೇಶನದಲ್ಲಿ ಈ ರ್ಘಟನೆ ಸಂಭವಿಸಿದೆ.

ನಿವೇಶನದಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ಬೃಹತ್ ಗುಂಡಿ ಅಗೆಯಲಾಗಿತ್ತು. ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ನೀರು ಸಂಗ್ರಹಗೊಂಡಿತ್ತು.

ಇದನ್ನು ಕಂಡ ಯುವಕ ತಕ್ಷಣವೇ ಜಿಗಿದು ಬಾಲಕಿಯನ್ನು ದಡಕ್ಕೆ ಎಳೆತಂದಿದ್ದಾನೆ. ಈ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದ್ದು, ಎಲ್ಲೆಡೆ ಹರಿದಾಡುತ್ತಿದೆ.

ಬಾಲಕಿ ಹಾಗೂ ಆಕೆಯನ್ನು ರಕ್ಷಿಸಿದ ಯುವಕ ಯಾರು ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಘಟನೆಯಿಂದ ಎಚ್ಚೆತ್ತಕೊಂಡ ನಿವೇಶನ ಮಾಲೀಕರು ಸುತ್ತಲೂ ಟಿನ್ ಅಳವಡಿಸಿ ಭದ್ರತೆ ಮಾಡಿದ್ದಾರೆ.

Advertisement

ನೇತಾಜಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next