Advertisement

Video: ಎಲ್ಲಾ ಸತ್ಯ ಹೊರ ತರುತ್ತೇನೆ: ತಂದೆ ವಿರುದ್ದ ಬಾಂಬ್‌ ಹಾಕಿದ ಸಿಪಿವೈ ಪುತ್ರಿ ನಿಶಾ

12:29 PM Oct 21, 2024 | Team Udayavani |

ರಾಮನಗರ: “ಕೆಲವರು ಒಳ್ಳೆಯವರಂತೆ ಸಮಾಜಕ್ಕೆ ಬಿಂಬಿಸಿ ತೋರಿಸಿದ್ದಾರೆ. ಅಂಥವರ ಸತ್ಯವನ್ನು ಹೊರ ತರುತ್ತೇನೆ” ಇದು ಸಿಪಿ ಯೋಗೇಶ್ವರ್‌ ಅವರ ಪುತ್ರಿ ನಿಶಾ ಯೋಗೇಶ್ವರ್ (Nisha Yogeshwar) ಸಿಡಿಸಿದ ಹೊಸ ಬಾಂಬ್.

Advertisement

ಒಂದೆಡೆ ಚನ್ನಪಟ್ಟಣದಲ್ಲಿ ಟಿಕೆಟ್‌ ಪಡೆಯಲು ಸಿಪಿವೈ ಹರಸಾಹಸ ಪಡುತಿದ್ದರೆ, ಮತ್ತೊಂದೆಡೆ ಅಪ್ಪನಿಂದ ಅಂತರ ಕಾಯ್ದುಕೊಂಡಿರುವ ಪುತ್ರಿ ನಿಶಾ ಮತ್ತೆ ಟಾಂಗ್ ನೀಡಿದ್ದಾರೆ. ಹೀಗಾಗಿ ಈಗ ಅಪ್ಪ – ಮಗಳ ಜಗಳ ಮತ್ತೆ ಮುನ್ನೆಲೆಗೆ ಬಂದಿದೆ. ನಿಶಾ ಅವರು ಯಾರ ಹೆಸರು ಬಳಸದೇ ಮಾರ್ಮಿಕವಾಗಿ ನಿಶಾ ವಾಗ್ದಾಳಿ ನಡೆಸಿದ್ದಾರೆ.

“ನಾನು ನನ್ನ ಜೀವನದಲ್ಲಿ ನೆಮ್ಮದಿಯಾಗಿ ಇರಲು ಪ್ರಯತ್ನಿಸಿದೆ. ಆದರೆ‌ ಏನನ್ನೂ ಮಾಡದ ಪರಿಸ್ಥಿತಿಯಿದೆ. ಯಾವ ಕ್ಷೇತ್ರದಲ್ಲೂ ಮುಂದೆ ಬರದಂತೆ‌ ಮಾಡಿದ್ದಾರೆ. ವಿದ್ಯಾಭ್ಯಾಸ, ಸಿನಿಮಾ‌ ಕ್ಷೇತ್ರದಿಂದಲೂ ನನಗೆ ಸಕ್ಸಸ್ ಆಗದಂತೆ ನೋಡಿಕೊಂಡರು. ಪದವಿ ಮಾಡದಂತೆ ಒತ್ತಡ ಹಾಕಿದರು. ಕಷ್ಟಪಟ್ಟು ಕಾಲೇಜಿಗೆ ಟಾಪರ್ ಆದೆ. ಉದ್ಯೋಗ ಮಾಡದಂತೆ ಒತ್ತಡ ಹಾಕಿದರು. ರಾಜಕೀಯದಲ್ಲಿ ಬರುವುದಕ್ಕೆ‌ ಪ್ರಯತ್ನ ಪಟ್ಟೆ. ಅಲ್ಲೂ ನಾನೂ ರಾಜಕೀಯಕ್ಕೆ ಬರದಂತೆ‌ ನೋಡಿಕೊಂಡರು. ಈಗ ಸಮಾಜ ಸೇವೆ ಮಾಡುವುದಕ್ಕೆಂದು ಹೊರಟರೂ ಬಿಡುತ್ತಿಲ್ಲ” ಎಂದು ವಿಡಿಯೋದಲ್ಲಿ ನಿಶಾ ಹೇಳಿಕೊಂಡಿದ್ದಾರೆ.

“ರಾಜಕೀಯ ಕುಟುಂಬದಿಂದ ಬಂದಿದ್ದರೂ ನನಗೆ ರಕ್ಷಣೆ ಇಲ್ಲ. ನಿಜವಾದ ಕಥೆ ಬೇರೆಯೇ ಇದೆ,‌ ಸತ್ಯ ಬೇರೆ ಇದೆ. ಆ‌ ಸತ್ಯವನ್ನು ಬಹಳ ಬೇಗ ಹೊರಗಡೆ ತರುತ್ತೇನೆ” ಎಂದು ನಿಶಾ ಹೇಳಿದ್ದಾರೆ.

Advertisement

ಮೈತ್ರಿ ಟಿಕೆಟ್ ಗಾಗಿ ಸಂಘರ್ಷ ನಡೆಯುತ್ತಿರುವ ಸಂದರ್ಭದಲ್ಲಿ ಸಿಪಿ ಯೋಗೇಶ್ವರ್‌ ಪುತ್ರಿ ಶಾಕಿಂಗ್ ಹೇಳಿಕೆ‌ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next