Advertisement

Uttar Pradesh: ಕರ್ವಾ ಚೌತ್‌ ಭೋಜನದಲ್ಲಿ ವಿಷವಿಕ್ಕಿ ಪತಿಯನ್ನು ಕೊಂದ ಪತ್ನಿ

10:28 PM Oct 21, 2024 | Team Udayavani |

ಕೌಶಾಂಬಿ: ಆಹಾರದಲ್ಲಿ ವಿಷ ಬೆರೆಸಿ ಪತಿಯನ್ನು ಕೊಂದ ಆರೋಪದ ಮೇರೆಗೆ ಮಹಿಳೆಯೊಬ್ಬರನ್ನು ಉತ್ತರಪ್ರದೇಶ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Advertisement

ಕಡಾ ಧಾಮ್‌ ಪ್ರದೇಶದ ಇಸ್ಮಾಯಿಲ್‌ಪುರದಲ್ಲಿ ಈ ಘಟನೆ ನಡೆದಿದೆ.

ಮೃತ ವ್ಯಕ್ತಿಯನ್ನು ಶೈಲೇಶ್‌ ಎಂದು ಗುರುತಿಸಲಾಗಿದ್ದು, ಭಾನುವಾರ ರಾತ್ರಿ ನಡೆದ ಕರ್ವಾ ಚೌತ್‌ ಆಚರಣೆಯ ಪ್ರಯುಕ್ತ ತನ್ನ ಪತ್ನಿ ತಯಾರಿಸಿದ್ದ ಭೋಜನ ಸೇವಿಸಿ ತೀವ್ರ ಅಸ್ವಸ್ಥರಾಗಿದ್ದರು. ನಂತರ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫ‌ಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next