Advertisement

Bhopal: ಜಮೀನು ಮರಳಿ ಪಡೆಯಲು ಡಿಸಿ ಕಚೇರಿಯಲ್ಲಿ ರೈತನ ಉರುಳುಸೇವೆ!

11:34 AM Jul 18, 2024 | Team Udayavani |

ಭೋಪಾಲ್‌: ಸರಕಾರಿ ಅಧಿಕಾರಿಯೊಬ್ಬರು ನನ್ನ 5.5 ಎಕ್ರೆ ಜಮೀನು ವಶಪಡಿಸಿಕೊಂಡಿದ್ದಾರೆ. ಅದನ್ನು ವಾಪಸ್‌ ನೀಡಿ ಎಂದು ಕೈಮುಗಿದುಕೊಂಡು ವೃದ್ಧ ರೈತನೊಬ್ಬ ಮಧ್ಯಪ್ರದೇಶದ ಮಂದಸೌರ್‌ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೈಮುಗಿದುಕೊಂಡು ಉರುಳು ಸೇವೆ ಮಾಡಿದ್ದಾರೆ.

Advertisement

ಜಿಲ್ಲಾಧಿಕಾರಿ ಕಚೇರಿಯಲ್ಲೇ ಕೆಲಸ ಮಾಡುವ ಬಾಬು ದೇಶ್‌ಮುಖ್‌, 65 ವರ್ಷದ ವೃದ್ಧನಿಗೆ ಮೋಸ ಮಾಡಿ, 2010ರಲ್ಲಿ 5.5 ಎಕ್ರೆ ಜಮೀನನ್ನು ಪಡೆದಿದ್ದಾನೆ ಎಂದು ಆರೋಪಿಸಲಾಗಿದೆ.

ಅಂದಿನಿಂದಲೂ ವೃದ್ಧ ಜಮೀನು ಮರಳಿ ಪಡೆಯಲು ಇನ್ನಿಲ್ಲದ ಪ್ರಯತ್ನ ಮಾಡಿದ್ದಾನೆ. ಪ್ರಧಾನಿ, ರಾಷ್ಟ್ರಪತಿಗಳಿಗೆ ಪತ್ರ ಬರೆದರೂ ಪ್ರಯೋಜನ ವಾಗಿಲ್ಲ ಎಂದು ರೈತ ಹೇಳಿಕೊಂಡಿದ್ದಾನೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಜಿಲ್ಲಾಡಳಿತ ವೃದ್ಧನ ಕುಟುಂಬದವರೇ ಜಮೀನನ್ನು ಮಾರಾಟ ಮಾಡಿದ್ದಾರೆ. ಮಾರಾಟವಾದ ಜಮೀನು ಮರಳಿ ನೀಡಿ ಎಂದು ವೃದ್ಧ ಪ್ರತಿಪಾದಿಸುತ್ತಿದ್ದಾನೆ ಎಂದು ತಿಳಿಸಿದೆ.

ಇದನ್ನೂ ಓದಿ: Joe Biden: ಅಮೆರಿಕ ಅಧ್ಯಕ್ಷ ಜೋ ಬೈಡನ್​ಗೆ ಕೋವಿಡ್​ ದೃಢ… ನಿಗದಿತ ಕಾರ್ಯಕ್ರಮಗಳು ರದ್ದು

Advertisement
Advertisement

Udayavani is now on Telegram. Click here to join our channel and stay updated with the latest news.

Next