Advertisement

ಕಾನೂನು ಹೋರಾಟದಲ್ಲಿ ನಮಗೆ ಜಯ: ಸುಧಾಕರ್

08:16 PM Aug 29, 2019 | Sriram |

ಚಿಕ್ಕಬಳ್ಳಾಪುರ:  ನಮ್ಮನ್ನು ಅರ್ನಹ ಮಾಡಿರುವ ಪ್ರಕರಣದ ವಿರುದ್ದ ನಾವು ನಡೆಸುತ್ತಿರುವ ಕಾನೂನು ಹೋರಾಟದಲ್ಲಿ ನಮಗೆ ಜಯ ಸಿಗುತ್ತದೆಯೆಂಬ ವಿಶ್ವಾಸವಿದೆಯೆಂದು ಚಿಕ್ಕಬಳ್ಳಾಪುರ ಕ್ಷೇತ್ರದ ಅರ್ನಹ ಶಾಸಕ ಡಾ.ಕೆ.ಸುಧಾಕರ್ ತಿಳಿಸಿದರು.

Advertisement

ಚಿಕ್ಕಬಳ್ಳಾಪುರದಲ್ಲಿ ಗುರುವಾರ ಡಿಸಿಸಿ ಬ್ಯಾಂಕ್ ವತಿಯಿಂದ ಸ್ತ್ರೀ ಶಕ್ತಿ ಸಂಘಗಳಿಗೆ ಸಾಲದ ಚೆಕ್ ಗಳನ್ನು ವಿತರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಸ್ಪೀಕರ್ ಅಗಿ ರಮೇಶ್ ಕುಮಾರ್ ಅನೈತಿಕ ವಾಗಿ ನಮ್ಮನ್ನು ಅರ್ನಹ ಗೊಳಿಸಿ ನೀಡಿರುವ ತೀರ್ಪುನ್ನು ಸುಪ್ರೀಂಕೋರ್ಟ್ ವಜಾಗೊಳಿಸಲಿದೆಯೆಂನ ವಿಶ್ವಾಸ ನಮಗೆ ಇದೆ ಎಂದರು. ನಮ್ಮ ಕ್ಷೇತ್ರಗಳ ಅಭಿವೃದ್ಧಿಯ ದೃಷ್ಟಿಯಿಂದ ನಾವೆಲ್ಲಾ ಒಟ್ಟಾಗಿ ಚರ್ಚೆ ಮಾಡಿ ನಮ್ಮ ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದೇವೆ ಎಂದರು. ನಮ್ಮ ವಿರುದ್ದ ಅನೈತಿಕ ವಾಗಿ ಕೆಟ್ಟ ನಿರ್ಣಯವನ್ನು ತೆಗೆದುಕೊಂಡರೆಂದು ರಮೇಶ್ ಕುಮಾರ್ ವಿರುದ್ದ ಅರ್ನಹ ಶಾಸಕ ಸುಧಾಕರ್ ತಮ್ಮ ಆಕ್ರೋಶ ಹೊರ ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next