Advertisement

Tribute: “ವಿಜಯ ದಿವಸ”- ಹುತಾತ್ಮರಿಗೆ ದೇಶದ ನಮನ

10:07 PM Dec 16, 2023 | Team Udayavani |

ನವದೆಹಲಿ: ಬಾಂಗ್ಲಾದೇಶ ವಿಮೋಚನಾ ಕಾರ್ಯಾಚರಣೆ, 1971ರಲ್ಲಿ ಪಾಕಿಸ್ತಾನ ವಿರುದ್ಧ ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ವೀರ ಯೋಧರಿಗೆ ಗೌರವ ನಮನ ಅರ್ಪಿಸಲಾಯಿತು. ಡಿ.16ರ ದಿನವನ್ನು ದೇಶಾದ್ಯಂತ “ವಿಜಯ ದಿವಸ” ಆಗಿ ಆಚರಿಸಲಾಗುತ್ತದೆ.

Advertisement

ನವದೆಹಲಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಗೃಹ ಸಚಿವ ಅಮಿತ್‌ ಶಾ ಮತ್ತು ಇತರ ಗಣ್ಯರು ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದರು.

ಈ ಬಗ್ಗೆ ಟ್ವೀಟ್‌ ಮಾಡಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು “1971ರ ಯುದ್ಧದಲ್ಲಿ ನಮ್ಮ ಸಶಸ್ತ್ರ ಪಡೆಯು ಮಾಡಿದ ನಿಸ್ವಾರ್ಥ ತ್ಯಾಗವನ್ನು ರಾಷ್ಟ್ರವು ಕೃತಜ್ಞತೆಯಿಂದ ಸ್ಮರಿಸುತ್ತದೆ. ಈ ದಿನ ಅಪ್ರತಿಮ ಧೈರ್ಯವನ್ನು ಪ್ರದರ್ಶಿಸಿ ಐತಿಹಾಸಿಕ ಜಯವನ್ನು ಸಾಧಿಸಿದ ವೀರ ಯೋಧರಿಗೆ ಗೌರವ ಸಲ್ಲಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

“ವಿಜಯ ದಿವಸದ ಈ ಸಂದರ್ಭದಲ್ಲಿ 1971ರಲ್ಲಿ ಭಾರತಕ್ಕೆ ನಿರ್ಣಾಯಕ ವಿಜಯ ತಂದುಕೊಟ್ಟ ವೀರ ಯೋಧರಿಗೆ ಹೃತೂ³ರ್ವಕ ನಮನಗಳು. ಅವರ ಶೌರ್ಯ ಮತ್ತು ಸಮರ್ಪಣೆ ದೇಶಕ್ಕೆ ಸದಾ ಹೆಮ್ಮೆಯ ವಿಷಯವಾಗಿದೆ” ಎಂದು ಪ್ರಧಾನಿ ಮೋದಿ ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next