Advertisement

ವೆಂಕಟರಮಣ ಮೊಗೇರ ಅವರಿಗೆ ಸಮ್ಮಾನ

07:30 AM Aug 23, 2017 | Harsha Rao |

ಕೋಟೇಶ್ವರ: ಕರ್ನಾಟಕ ರಾಜ್ಯ ಅಗ್ನಿಶಾಮಕ, ತುರ್ತು ಸೇವಾ ಇಲಾಖೆಯಲ್ಲಿ ಅತ್ಯುತ್ತಮ ಸೇವೆಯನ್ನು ಗುರುತಿಸಿ ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕ ಪ್ರಶಸ್ತಿ ವಿಜೇತ  ಕುಂದಾಪುರ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ವೆಂಕಟರಮಣ ಮೊಗೇರ ಅವರಿಗೆ ಕೋಣಿಯ ಅಗ್ನಿಶಾಮಕ ಠಾಣೆಯ ಸಿಬಂದಿಯ ವತಿಯಿಂದ ಸಮ್ಮಾನಿಸಲಾಯಿತು.

Advertisement

ಅಗ್ನಿಶಾಮಕ ದಳದ ನೌಕಕರು ವೆಂಕಟರಮಣ ಮೊಗೇರ ದಂಪತಿಯನ್ನು  ಸಮ್ಮಾನಿಸಿದರು. ಈ ಸಂದರ್ಭ ಜಿ.ಪಂ. ಮಾಜಿ ಸದಸ್ಯ ಗಣಪತಿ ಶ್ರೀಯಾನ್‌ ಮಾತನಾಡಿ ಅಗ್ನಿಶಾಮಕ ಇಲಾಖೆಯ ಕಾರ್ಯತತ್ಪರತೆ ಹಾಗೂ ಬೆಂಕಿ ಅನಾಹುತದಲ್ಲಿ ಸಂಭವಿಸುವ ದುರಂತ ವನ್ನು ತಪ್ಪಿಸುವಲ್ಲಿ ತಮ್ಮ ಜೀವವನ್ನೇ ಪಣವಿಟ್ಟು  ಅಪಾಯದಲ್ಲಿ ಇರುವವರನ್ನು ಕಾಪಾಡುವ ಪರಿಯನ್ನು ವಿವರಿಸಿದರು. 

ಕುಂದಾಪುರ ತಾ| ಕ.ಸಾ.ಪ.ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next