Advertisement

ವೆಳ್ಳರಿಕುಂಡ್‌ ತಾಲೂಕು ಆನ್‌ಲೈನ್‌ ಅದಾಲತ್‌: 15 ದೂರುಗಳಿಗೆ ತೀರ್ಪು

10:47 PM Sep 23, 2020 | mahesh |

ಕಾಸರಗೋಡು: ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ ಬಾಬು ಅವರ ನೇತೃತ್ವದಲ್ಲಿ ನಡೆಯುತ್ತಿರುವ ತಾಲೂಕು ಮಟ್ಟದ ದೂರು ಪರಿಹಾರ ಅದಾಲತ್‌ಗಳ ಅಂಗವಾಗಿ ವೆಳ್ಳರಿಕುಂಡ್‌ ತಾಲೂಕು ಮಟ್ಟದ ಆನ್‌ಲೈನ್‌ ಅದಾಲತ್‌ ಜರುಗಿತು.

Advertisement

ಒಟ್ಟು 20 ದೂರುಗಳು ಸಲ್ಲಿಕೆಯಾಗಿದ್ದು, 15 ದುರುಗಳಿಗೆ ತೀರ್ಪು ನೀಡಲಾಗಿದೆ. 5 ದೂರುಗಳನ್ನು ಮುಂದಿನ ಕ್ರಮಗಳಿಗಾಗಿ ಆಯಾ ಇಲಾಖೆಗಳ ಸಿಬ್ಬಂದಿಗಳಿಗೆ ಹಸ್ತಾಂತರಿಸಲಾಗಿದೆ.

ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ ಬಾಬು ನೇತೃತ್ವ ವಹಿಸಿದ್ದರು. ಉಪಜಿಲ್ಲಾಧಿಕಾರಿ ಡಿ.ಆರ್‌.ಮೇಘಶ್ರೀ, ಹೆಚ್ಚುವರಿ ದಂಡನಾಧಿಕಾರಿ ಎನ್‌. ದೇವಿದಾಸ್‌, ವೆಳ್ಳರಿಕುಂಡ್‌ ತಹಶೀಲ್ದಾರ್‌ ಕುಂಞಿಕಣ್ಣನ್‌, ವಿವಿಧ ಇಲಾಖೆಗಳ ಮುಖ್ಯಸ್ಥರು ಮೊದಲಾದವರು ಉಪಸ್ಥಿತರಿದ್ದರು.

ಕೋತಿಗಳ ಕಾಟ ನಿಯಂತ್ರಣಕ್ಕೆ ಗೂಡು
ಕೋತಿಗಳ ಕಾಟ ನಿಯಂತ್ರಣಕ್ಕೆ ತಾಲೂಕಿನ ಅಯರೋಟ್‌ನಲ್ಲಿ ಗೂಡು ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅದಾಲತ್‌ನಲ್ಲಿ ತಿಳಿಸಿದರು. ಈ ಸಂಬಂಧ ಕೆ. ನಾರಾಯಣನ್‌, ಕೆ. ರಾಜೀವ್‌, ಎಂ.ಕೆ. ಕೃಷ್ಣ ಕುಮಾರ್‌ ದೂರು ನೀಡಿದ್ದರು. ಈ ವೇಳೆ ನಡೆದಿರುವ ಕೃಷಿ ನಾಶಕ್ಕೆ ಸಂಬಂಧಿಸಿ ದೂರುದಾತರು ಅರ್ಜಿ ಸಲ್ಲಿಸಿದ ತತ್‌ಕ್ಷಣವೇ ಪರಿಹಾರ ಮೊಬಲಗನ್ನೂ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.

ಕೃಷಿ ಜಾಗಕ್ಕೆ ಕಾಡಾನೆ ಹಾವಳಿಯಿದ್ದು, ಅವನ್ನು ಬೆದರಿಸಿ ಓಡಿಸುವ ನಿಟ್ಟಿನಲ್ಲಿ ಎಂ.ಕೆ. ಕೃಷ್ಣ ಕುಮಾರ್‌ ಅವರಿಗೆ ಬಂದೂಕು ಪರವಾನಗಿ ನೀಡಲಾಗುವುದು ಎಂದು ತಿಳಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next