Advertisement

ಉಡುಪಿ ಸಂತೆಕಟ್ಟೆ: ಹುಲಿವೇಷಧಾರಿಗಳ ವಾಹನ ಪಲ್ಟಿ; ಓರ್ವ ಸಾವು

09:41 AM Sep 05, 2019 | keerthan |

ಉಡುಪಿ: ಹುಲಿವೇಷಧಾರಿಗಳಿದ್ದ ವಾಹನ ಪಲ್ಟಿಯಾಗಿ ಓರ್ವ ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಬುಧವಾರ ನೇಜಾರಿನಲ್ಲಿ ನಡೆದಿದೆ.

Advertisement

ಪಡುಬಿದ್ರಿಯ ಸುಮಂತ್ (22) ಮೃತ ವೇಷಧಾರಿ.

ಗಣೇಶ ವಿಸರ್ಜನೆಯ ಮೆರವಣಿಗೆಯ ಪ್ರಯುಕ್ತ ಇವರು ಸಂತೆಕಟ್ಟೆಗೆ ಟೆಂಪೋದಲ್ಲಿ ತೆರಳುತ್ತಿದ್ದರು. ವಾಹನದಲ್ಲಿ 12ಕ್ಕೂ ಹೆಚ್ಚು ಮಂದಿ ವೇಷಧಾರಿಗಳಿದ್ದರು. ನೇಜಾರು ಆಟದ ಮೈದಾನದ ಬಳಿ ಘಟನೆ ಸಂಭವಿಸಿದೆ.

ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಐವರು ವೇಷಧಾರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಗಾಯಾಳುಗಳನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next