Advertisement

ಟೈರ್‌ ಬದಲಿಸುವ ವೇಳೆ ವಾಹನ ಡಿಕ್ಕಿ: ಮೂವರ ಸಾವು

11:01 PM Jan 22, 2020 | Lakshmi GovindaRaj |

ಬೀದರ: ಹುಮನಾಬಾದ ತಾಲೂಕಿನ ಮೀನಕೇರಾ ಕ್ರಾಸ್‌ನ ರಾಷ್ಟ್ರೀಯ ಹೆದ್ದಾರಿಯ ಫ್ಲೈಓವರ್‌ ಮೇಲೆ ಮಂಗಳವಾರ ಮಧ್ಯರಾತ್ರಿ ಪಂಕ್ಚರ್‌ ಆಗಿದ್ದ ಗೂಡ್ಸ್‌ ವಾಹನದ ಟೈರ್‌ ಬದಲಾಯಿಸುವ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಮೂವರು ಸ್ಥಳದಲ್ಲೇ ಮೃತ ಪಟ್ಟಿದ್ದಾರೆ.

Advertisement

ಹುಮನಾಬಾದ ತಾಲೂಕಿನ ಚಾಂಗಲೇರಾದ ಅನ್ಸರ್‌ ಮಸ್ತಾನ್‌ಸಾಬ್‌ (24), ಚಿಂಚೋಳಿ ತಾಲೂಕಿನ ಬಸವಂತಪುರದ ಇಸ್ಮಾಯಿಲ್‌ ಸೌದರಮಿಯ್ನಾ (25) ಮತ್ತು ರಾಮಶೆಟ್ಟಿ ನಾಯಕ ತಾಂಡಾದ ವಿಜಯಕುಮಾರ ಭೀಮಸಿಂಗ್‌ ರಾಠೊಡ್‌ (32) ಮೃತರು.

ರಾಮಶೆಟ್ಟಿ ನಾಯಕ ತಾಂಡಾದಿಂದ ಗೂಡ್ಸ್‌ ವಾಹನದಲ್ಲಿ ಹೈದ್ರಾಬಾದ್‌ಗೆ ಈರುಳ್ಳಿ ಸಾಗಿಸುವ ವೇಳೆ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಮೀನಕೇರಾ ಕ್ರಾಸ್‌ ಬಳಿ ಪಂಕ್ಚರ್‌ ಆಯಿತು. ವಾಹನದ ಟೈರ್‌ ಬದಲಾಯಿಸು ತ್ತಿದ್ದಾಗ ಅಪರಿಚಿತ ವಾಹನ ಡಿಕ್ಕಿ ಹೊಡೆಯಿತು. ಬಗದಲ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next