Advertisement

ಭ್ರಷ್ಟರನ್ನು ತೆಗೆಯುವ ವಿಧಾನ ಪ್ರಧಾನಿ ಮೋದಿ ,ಅಮಿತ್ ಶಾಗೆ ಗೊತ್ತಿದೆ –ವೀರಪ್ಪ ಮೊಯ್ಲಿ

02:30 PM Jul 25, 2021 | Team Udayavani |

ಮಂಗಳೂರು:  ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯ್ಲಿ ರವಿವಾರ ಆಸ್ಪತ್ರೆಗೆ ತೆರಳಿ ಆಸ್ಕರ್ ಫರ್ನಾಂಡೀಸ್ ಆರೋಗ್ಯ ವಿಚಾರಿಸಿದರು.

Advertisement

ಈ ವೇಳೆ ಮಾಧ್ಯಮದವರೊಂದಿಗೆ ಮಾತಾನಾಡಿ ಅವರು, ಸಿಎಂ ಬದಲಾವಣೆ ವಿಚಾರ ಬಿಜೆಪಿಗೆ ಬಿಟ್ಟದ್ದು. ಬಿಜೆಪಿ ಸಂಪ್ರದಾಯದ ಪ್ರಕಾರ ಭ್ರಷ್ಟರನ್ನು, ಅಧಕ್ಷರನ್ನು ತೆಗೆಯುವ ವಿಧಾನ ಪ್ರಧಾನಿ ಮೋದಿ ಅವರಿಗೆ ಗೊತ್ತಿದೆ, ಅಮಿತ್ ಶಾ ಅವರಿಗೆ ತಿಳಿದಿದೆ ಎಂದರು.

ಇದನ್ನೂ ಓದಿ: ಒಂದೇ ದಿನದಲ್ಲಿ ತುಂಗಭದ್ರಾ ಜಲಾಶಯಕ್ಕೆ ಹರಿದುಬಂತು 12 ಟಿಎಂಸಿ ನೀರು 

ಸಿಎಂ ಬದಲಾಯಿಸಿದ ಕೂಡಲೇ ಪಕ್ಷದ ಮೇಲಿನ ಆಪಾದನೆ ಬಗ್ಗೆ ಜನ ಮರೆಯುತ್ತಾರೆ ಎಂಬ ಭಾವನೆ ಅವರದ್ದು. ಕೇಂದ್ರ ಸಚಿವ ಹರ್ಷ ವರ್ಧನ ಅವರನ್ನು ಕೋವಿಡ್ ಸರಿಯಾಗಿ ನಿರ್ವಹಿಸಿಲ್ಲ ಎಂದು ಬದಲಾಯಿಸಿದರು. ಆದರೆ ಜನರು ಮರೆಯುವುದಿಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next