Advertisement

ಶೀಘ್ರವೇ ಆಸ್ಪತ್ರೆಯಿಂದ ವಾವಾ ಸುರೇಶ್‌ ಡಿಸ್ಚಾರ್ಜ್

09:56 PM Feb 05, 2022 | Team Udayavani |

ತಿರುವನಂತಪುರಂ: ವಿಷಕಾರಿ ನಾಗರ ಹಾವನ್ನು ಹಿಡಿಯುವಾಗ ಅದರಿಂದ ಕಚ್ಚಿಸಿಕೊಂಡು ಆಸ್ಪತ್ರೆ ಸೇರಿದ್ದ ಕೇರಳದ ಖ್ಯಾತ ಉರಗ ರಕ್ಷಕ ವಾವಾ ಸುರೇಶ್‌ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ. ಅವರನ್ನು ಸೋಮವಾರ ಡಿಸ್ಚಾರ್ಜ್ ಮಾಡುವ ಸಾಧ್ಯತೆಯಿದೆ ಎಂದು ಕೊಟ್ಟಾಯಂನ ಸರ್ಕಾರಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

Advertisement

ಸುರೇಶ್‌ ಅವರು, ವೈದ್ಯಕೀಯ ಸಿಬ್ಬಂದಿ ಜೊತೆ ಮಾತನಾಡುತ್ತಿದ್ದಾರೆ. ನಡೆದಾಡಲೂ ಆರಂಭಿಸಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

ಸುರೇಶ್‌ ಅವರು ಜ.31ರಂದು ಕುರಿಚಿ ಬಳಿ 10 ಅಡಿ ಉದ್ದದ ನಾಗರ ಹಾವೊಂದನ್ನು ರಕ್ಷಿಸುತ್ತಿದ್ದ ವೇಳೆ, ಹಾವು ಅವರ ಬಲ ತೊಡೆಗೆ ಕಚ್ಚಿತ್ತು. ಪ್ರಜ್ಞೆ ತಪ್ಪಿ ಬಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next