Advertisement

ಭಾರತ ಮಾತಾ ಪೂಜನೆ ಉದ್ಘಾಟನೆ ಜಡ ವಸ್ತುವಿಗೂ ದೈವಿಕ ಸ್ಥಾನ: ಸುರೇಶ್‌ 

02:55 PM Mar 09, 2017 | |

ತೆಕ್ಕಟ್ಟೆ: ತೆಕ್ಕಟ್ಟೆ ಬಜರಂಗ ದಳ ಹಾಗೂ ವಿ.ಹಿಂ.ಪ.ಇವರ ಸಹಯೋಗದೊಂದಿಗೆ ತೆಕ್ಕಟ್ಟೆ ಕಂಚುಗಾರು ಬೆಟ್ಟು ಶ್ರೀ ಜೈನ ಸನ್ನಿಧಿಯಲ್ಲಿ  ಮಾ. 5ರಂದು ನಡೆದ ಭಾರತ ಮಾತಾ ಪೂಜನಾ ಕಾರ್ಯಕ್ರಮವನ್ನು ಕೋಟೇಶ್ವರ ಸ.ಪ.ಪೂ. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಮಂಜುನಾಥ ಹೊಳ್ಳ  ಉದ್ಘಾಟಿಸಿದರು.

Advertisement

ಈ ಸಂದರ್ಭ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉಡುಪಿಯ ಬೋಧಿಕ್‌ ಪ್ರಚಾರಕ ಸುರೇಶ್‌ ಹೆಜಮಾಡಿ ತಾಯಿ ಭಾರತಾಂಬೆಯ ಭಾವಚಿತ್ರಕ್ಕೆ ಪುಷº ನಮನ ಸಲ್ಲಿಸಿ ಮಾತನಾಡಿ ಭಾರತೀಯ ಪರಂಪರೆಯಂತೆ ಸಾಧು ಸಂತರು, ಪರಮ ಪೂಜ್ಯ ಗುರುವರ್ಯರು, ನಮ್ಮ ದೈವ, ದೇವರುಗಳು ಹೀಗೆ ಸಹಸ್ರಾರು ಕೋಟಿ ದೇವರು ಧರ್ಮವನ್ನು ಆರಾಧಿಸುತ್ತಿದ್ದ ಈ ತಾಯಿ ನೆಲದಲ್ಲಿ ಜಡ ವಸ್ತುವಿಗೂ ಕೂಡಾ ದೈವಿಕ ಸ್ಥಾನ ನೀಡಿದ ಸಮಾಜ ಅದು ಹಿಂದೂ ಸಮಾಜ  ಎಂದರು.

ತೆಕ್ಕಟ್ಟೆ ಬಜರಂಗ ದಳದ ಸಂಚಾಲಕ ಶ್ರೀನಾಥ್‌ ಶೆಟ್ಟಿ  ಮೇಲ್ತಾರುಮನೆ, ಹಿರಿಯರಾದ  ಚಂದ್ರಶೇಖರ ಶೆಟ್ಟಿ, ವಿಟuಲ್‌ ರಾವ್‌, ರಾಮಚಂದ್ರ ಆಚಾರ್ಯ ತೆಕ್ಕಟ್ಟೆ, ಪುರಂದರ ತೋಟದಬೆಟ್ಟು, ಅವಿನಾಶ್‌ ಶೆಟ್ಟಿ ಪಠೇಲರ ಮನೆ ಹಾಗೂ ತೆಕ್ಕಟ್ಟೆ ಬಜರಂಗ ದಳ ಹಾಗೂ ವಿಶ್ವ ಹಿಂದೂ ಪರಿಷತ್‌ ನ ಕಾರ್ಯಕರ್ತರು  ಉಪಸ್ಥಿತರಿದ್ದರು.

ತೆಕ್ಕಟ್ಟೆ ಬಜರಂಗ ದಳದ ಕಾರ್ಯಕರ್ತ  ಪ್ರಶಾಂತ್‌ ಶೆಟ್ಟಿ ಪಡುಕೆರೆ ಸ್ವಾಗತಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next