Advertisement

ವಸಾಯಿರೋಡ್‌ ಬಾಲಾಜಿ ಮಂದಿರ:ಪಕ್ಷೀ ಜಾಗರ,ತುಳಸಿ ಪೂಜೆ ಆಚರಣೆ

04:56 PM Nov 24, 2018 | |

ಮುಂಬಯಿ: ವಸಾಯಿ ರೋಡ್‌ ಪಶ್ಚಿಮದ ಗೌಡ ಸಾರಸ್ವತ ಬ್ರಾಹ್ಮಣ ಜಿಎಸ್‌ಬಿ ಸಮಾಜದವರ ಬಾಲಾಜಿ ಸೇವಾ ಸಮಿತಿಯ ಶ್ರೀ ವೆಂಕಟರಮಣ ಭಜನಾ ಮಂಡಳಿ ಯವರ ಬಾಲಾಜಿ ಮಂದಿರದಲ್ಲಿ ನ. 14 ರಿಂದ ನ. 20 ರವರೆಗೆ ಕಾರ್ತಿಕ ಮಾಸದ ಪಕ್ಷಿಜಾಗರ ಆಚರಣೆಯು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.

Advertisement

ಪ್ರತೀ ದಿನ ಪ್ರಾತ: ಕಾಲ 5 ರಿಂದ ವೆಂಕಟೇಶ ಸುಪ್ರಭಾತ ಸಾಮೂಹಿಕ ಪಠಣೆ, ಕಾಕಡ ಆರತಿ, ಉದಯರಾಗದಲ್ಲಿ ಭಜನೆ ಮತ್ತು ಇತರ ದೇವರ ಭಜನೆ ನಡೆಯಿತು. ಭಕ್ತಾದಿಗಳು ಮನೆಯಿಂದ ತಂದ ಆರತಿಯನ್ನು ವೇದಮೂರ್ತಿ ಗಿರಿ ಧರ ಭಟ್‌ ಅವರು ಬೆಳಗಿಸಿದರು. ಭಜನಾ ಕಾರ್ಯಕ್ರಮದಲ್ಲಿ ಹಾರ್ಮೋ ನಿಯಂನಲ್ಲಿ ಮಲ್ಪೆ ವಿಶ್ವನಾಥ ಪೈ, ತಬಲಾದಲ್ಲಿ ಗಣೇಶ್‌ ಪೈ ಮತ್ತು ನಿಡ್ಡೋಡಿ ಪ್ರಸಾದ್‌ ಪ್ರಭು ಅವರು ಸಹಕರಿಸಿದರು. ನ. 20 ರಂದು ದ್ವಾದಶಿಯ ರಾತ್ರಿ ತುಳಸಿ ಪೂಜೆಯು ಸಮಿತಿಯ ಜೈ ಅಮ್ಮಾ ಅನ್ನಪೂರ್ಣ ಸಭಾಗೃಹದಲ್ಲಿ ಸಮಾ ಜದ ಎಲ್ಲ ಸದಸ್ಯ ಬಾಂಧವರ ಉಪಸ್ಥಿತಿಯಲ್ಲಿ ನಡೆಯಿತು. ಧಾರ್ಮಿಕ ಕಾರ್ಯಕ್ರಮವನ್ನು ವೇದಮೂರ್ತಿ ಗಿರಿಧರ ಭಟ್‌ ಅವರ ಮಾರ್ಗದರ್ಶನದೊಂದಿಗೆ ಜರಗಿತು.

ಸಮಿತಿಯ ಮಾಜಿ ಅಧ್ಯಕ್ಷ ತಾರಾನಾಥ ಪೈ ಮತ್ತು ವಿಜಯಾ ಪೈ ಅವರು ಪೂಜಾ ವಿಧಿ-ವಿಧಾನಗಳಲ್ಲಿ ಸಹಕರಿಸಿದರು. ಸಮಿತಿಯ ಮಹಿಳಾ ವಿಭಾಗದವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಆನಂತರ ಮಹಾಮಂಗಳಾತಿ ನೆರವೇರಿತು. ಪ್ರಸಾದ ರೂಪದಲ್ಲಿ ಸುಧಾ ಸತ್ಯೇಂದ್ರ ನಾಯಕ್‌, ಶೋಭಾ ಶ್ರೀಧರ ಪ್ರಭು, ವಿದ್ಯಾ ಲಕ್ಷ¾ಣ್‌ ರಾವ್‌ ಮತ್ತು ವೀಣಾ ಯಶವಂತ್‌ ಕಾಮತ್‌ ಪರಿವಾರದರಿಂದ ಫಲಾಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ತುಳಸಿ ಪೂಜೆಗೆ ಪ್ರಸಾದ ರೂಪದಲ್ಲಿ ಲಕ್ಷ¾ಣ್‌ ರಾವ್‌, ತಾರನಾಥ ಪೈ, ಅರವಿಂದ ಹೊನ್ನಾವರ ಪರಿವಾರದವರು ಸಹಕರಿಸಿದರು.

ಸಮಿತಿಯ ಅಧ್ಯಕ್ಷ ಕೃಷ್ಣ ಕಾಮತ್‌, ಗೌರವಾಧ್ಯಕ್ಷ ವಸಂತ ನಾಯಕ್‌, ಕಾರ್ಯದರ್ಶಿ ಪುರುಷೋತ್ತಮ ಶೆಣೈ, ಕೋಶಾಧಿಕಾರಿ ಸುರೇಶ್‌ ಪೈ, ಸಂಚಾಲಕ ದೇವೇಂದ್ರ ಭಕ್ತ, ಮಹಿಳಾ ಪದಾಧಿಕಾರಿಗಳು, ಯುವ ವಿಭಾಗದ ಪದಾಧಿಕಾರಿಗಳು ಮತ್ತು ಸದಸ್ಯರ ಉಸ್ತುವಾರಿಯಲ್ಲಿ ಈ ಧಾರ್ಮಿಕ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ವಿನಾಯಕ ಎಚ್‌. ಪೈ ಅವರ ನೇತೃತ್ವದಲ್ಲಿ ಅಲಂಕರಿಸಿದ ತುಳಸಿ ಮಂಟಪ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next