Advertisement

KPCC ಸಭೆಯಲ್ಲಿ ವಿವಿಧ ಅಕಾಡೆಮಿ ಅಧ್ಯಕ್ಷರು ಭಾಗಿ: ಸುನಿಲ್‌

10:32 PM Jun 16, 2024 | Team Udayavani |

ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ವಿವಿಧ ಅಕಾಡೆಮಿಗಳ ಅಧ್ಯಕ್ಷರು ಭಾಗವಹಿಸಿದ್ದರ ಬಗ್ಗೆ ಮಾಜಿ ಕನ್ನಡ-ಸಂಸ್ಕೃತಿ ಸಚಿವ ವಿ. ಸುನಿಲ್‌ ಕುಮಾರ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸಾಹಿತ್ಯ-ಸಂಸ್ಕೃತಿ ಹಾಗೂ ಸೃಜನಶೀಲ ಕ್ಷೇತ್ರವು ರಾಜಕೀಯ ಒತ್ತಡಕ್ಕೆ ಅತೀತವಾಗಿರಬೇಕೆಂದು ಪ್ರತಿಪಾದಿಸುತ್ತಿದ್ದ ಅನೇಕ ಪ್ರಭೃತಿಗಳೇ ಈ ಸಭೆಯಲ್ಲಿ ಭಾಗವಹಿಸಿ ಹಾದಿಬೀದಿಯಲ್ಲಿ ಗೂಂಡಾಗಿರಿ ನಡೆಸುತ್ತಿದ್ದ ನಲಪಾಡ್‌ ಎದುರು ಕೈ ಕಟ್ಟಿ ನಿಂತಿದ್ದು ಅಸಹ್ಯದ ಪರಮಾವಧಿ ಎಂದು ಟೀಕಿಸಿದ್ದಾರೆ.

Advertisement

ಈ ಸಂಬಂಧ ಸಾಮಾಜಿಕ ಜಾಲತಾಣ “ಎಕ್ಸ್‌’ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ದೊಡ್ಡವರೆಲ್ಲ ಜಾಣರಲ್ಲ. ಬಿತ್ತಿದ್ದೇ ಬೆಳೆಯುತ್ತಿದೆ. ಅನುಭವಿಸಿ ಎಂದು ಸಾಹಿತಿಗಳ ಕಾಲೆಳೆದಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next