Advertisement

Belthangady: ಸೆ. 3: ಕನ್ಯಾಡಿ ಶ್ರೀಗಳ ಪಟ್ಟಾಭಿಷೇಕದ ವರ್ಧಂತ್ಯುತ್ಸವ

12:40 PM Sep 01, 2023 | Team Udayavani |

ಬೆಳ್ತಂಗಡಿ: ಕನ್ಯಾಡಿ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನ ಜಗದ್ಗುರು ಪೀಠದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರ ಪಟ್ಟಾಭಿಷೇಕದ 15ನೇ ವರ್ಧಂತ್ಯುತ್ಸವ ಸೆ. 3ರಂದು ಬೆಳಗ್ಗೆ 11 ಗಂಟೆಗೆ ಕಲ್ಮಂಜ ಗ್ರಾಮದ ದೇವರಗುಡ್ಡೆ ಶ್ರೀ ಗುರುದೇವ ಮಠದಲ್ಲಿ ನೆರವೇರಲಿದೆ.

Advertisement

ಧಾರ್ಮಿಕ ಸಭೆಯನ್ನು ಮೀನುಗಾರಿಕೆ ಸಚಿವ ಮಂಕಾಳ ಎಸ್‌. ವೈದ್ಯ ಉದ್ಘಾಟಿಸುವರು. ಶಾಸಕ ಹರೀಶ್‌ ಪೂಂಜ ಅಧ್ಯಕ್ಷತೆ ವಹಿಸಲಿದ್ದು, ಉಭಯ ಜಿಲ್ಲೆಗಳ ಎಲ್ಲ ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು ವಿವಿಧ ಸಂಘ-ಸಂಸ್ಥೆ ಅಧ್ಯಕ್ಷರು ಭಾಗವಹಿಸುವರು.

ಪೂರ್ವಾಹ್ನ 8ಕ್ಕೆ ಶ್ರೀ ರಾಮತಾರಕ ಯಜ್ಞ, ಭಜನೆ ಹಾಗೂ ವಿವಿಧ ವೈದಿಕ ಕಾರ್ಯಕ್ರಮಗಳು ಜರಗಲಿವೆ. ಪೂರ್ವಾಹ್ನ 11ಕ್ಕೆ ಗುರುಗಳ ಪೀಠಾರೋಹಣ, ಪಾದುಕಾಪೂಜೆ, 11.30ರಿಂದ ಧಾರ್ಮಿಕ ಸಭೆ, ಆಶೀರ್ವಚನ ಹಾಗೂ ಮಧ್ಯಾಹ್ನ 1 ಗಂಟೆಗೆ ಗುರುಗಳಿಂದ ಫಲ ಮಂತ್ರಾಕ್ಷತೆ ವಿತರಣೆ ನಡೆಯಲಿದೆ.

ಸೀಮೋಲ್ಲಂಘನ
ಗುರುಗಳ ಚಾತುರ್ಮಾಸ ವ್ರತವು ಆ. 31ರಂದು ಸಮಾಪನಗೊಂಡಿದ್ದು, ಶ್ರೀಗಳು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತೆರಳಿ ಸೀಮೋಲ್ಲಂಘನ ಕಾರ್ಯಕ್ರಮ ನಡೆಸಿದರು.

ಇದನ್ನೂ ಓದಿ: Srinivas University ಯಲ್ಲಿ ಹೊಸ ಕೋರ್ಸ್‌: ನವೀಕೃತ ಶಿಕ್ಷಣದೊಂದಿಗೆ ಕೌಶಲ ಅಭಿವೃದ್ಧಿ

Advertisement
Advertisement

Udayavani is now on Telegram. Click here to join our channel and stay updated with the latest news.

Next