Advertisement

ವಂದೇ ಮಾತರಂ, ದಫ‌ನ ಭೂಮಿ ಹೇಳಿಕೆ: ಗಿರಿರಾಜ್‌ ಸಿಂಗ್‌ಗೆ ಚು.ಆ. ನೊಟೀಸ್‌

08:41 AM Apr 30, 2019 | Sathish malya |

ಪಟ್ನಾ : ವಂದೇ ಮಾತರಂ ಹೇಳದವರಿಗೆ ದೇಶ ಎಂದೂ ಕ್ಷಮಿಸುವುದಿಲ್ಲ ಎಂದು ಬಿಹಾರದಲ್ಲಿನ ತನ್ನ ಚುನಾವಣಾ ರಾಲಿ ಭಾಷಣದಲ್ಲಿ ಹೇಳಿದ್ದ ಬಿಜೆಪಿಯ ಗಿರಿರಾಜ್‌ ಸಿಂಗ್‌ ಗೆ 24 ತಾಸುಗಳ ಒಳಗೆ ಉತ್ತರಿಸುವಂತೆ ಚುನಾವಣಾ ಆಯೋಗ ನೊಟೀಸ್‌ ಜಾರಿ ಮಾಡಿದೆ.

Advertisement

ವಂದೇ ಮಾತರಂ ಮಾತ್ರವಲ್ಲದೆ ಗಿರಿರಾಜ್‌ ಸಿಂಗ್‌ ಅವರು ದಫ‌ನ ಭೂಮಿಯ ಬಗ್ಗೆ ನೀಡಿದ್ದ ವಿವಾದಾತ್ಮಕ ಹೇಳಿಕೆಗೂ ಉತ್ತರಿಸುವಂತೆ ಚುನಾವಣಾ ಆಯೋಗ ನೊಟೀಸಿನಲ್ಲಿ ಅಪ್ಪಣೆ ಕೊಡಿಸಿದೆ.

ಗಿರಿರಾಜ್‌ ಸಿಂಗ್‌ ಮುಸ್ಲಿಮರ ವಿರುದ್ದದ ವಿವಾದಾತ್ಮಕ ಹೇಳಿಕೆಗಳ ಮೂಲಕ ಚುನಾವಣಾ ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ಬೇಗುಸರಾಯ್‌ ಜಿಲ್ಲಾಡಳಿತೆ ಕೂಡ ಇದಕ್ಕೆ ಮೊದಲು ಅವರ ವಿರುದ್ಧ ಕೇಸ್‌ ಬುಕ್‌ ಮಾಡಿಕೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next