Advertisement

EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ

01:07 AM Apr 20, 2024 | Team Udayavani |

ಕೋಲ್ಕತಾ: ಪಶ್ಚಿಮ ಬಂಗಾಲದಲ್ಲಿನ ಹಿಂಸಾಚಾರ ನಿಯಂತ್ರಿಸಲು ಚುನಾವಣ ಆಯೋಗ ವಿಫ‌ಲವಾಗಿದೆ ಎಂದು ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಚುನಾವಣ ಆಯೋಗ ಬಿಜೆಪಿ ಪರ ನಿಲುವು ಕೈಗೊಳ್ಳುತ್ತಿದೆ. ಹೀಗಾಗಿ ಅದು ಬಿಜೆಪಿ ಆಯೋಗ ಎಂದು ಕೋಲ್ಕತಾದಲ್ಲಿ ಮಾತನಾಡಿದ ವೇಳೆ ಟೀಕಿಸಿದ್ದಾರೆ.

Advertisement

ಕೂಚ್‌ ಬೆಹಾರ್‌ನಲ್ಲಿ ಕೇಂದ್ರೀಯ ಪಡೆಗಳನ್ನು ನಿಯೋಜನೆ ಮಾಡಿದ ರೀತಿಯೇ ಪ್ರಶ್ನಾರ್ಹ ಎಂದು ಆರೋಪಿಸಿದ್ದಾರೆ. ಪಶ್ಚಿಮ ಬಂಗಾಲ ಬಿಜೆಪಿ ಘಟಕದ ವಕ್ತಾರ ಸಮಿಕ್‌ ಭಟ್ಟಾಚಾರ್ಯ ಪ್ರತಿಕ್ರಿಯೆ ನೀಡಿ “ಟಿಎಂಸಿ ಮತದಾರರ ಮೇಲೆ ಪ್ರಭಾವ ಬೀರುವ ಪ್ರಯತ್ನ ಮಾಡಿದೆ. ಹಲವೆಡೆ ಆ ಪಕ್ಷ ಬೆಂಬಲಿತ ಗೂಂಡಾಗಳು ಮತದಾರರನ್ನು ಬಿಜೆಪಿ ಕಾರ್ಯಕರ್ತರನ್ನು ಥಳಿಸಿದ್ದಾರೆ. ಇದರ ಹೊರತಾಗಿಯೂ ಮೂರೂ ಕ್ಷೇತ್ರಗಳಲ್ಲಿ ಬಿಜೆಪಿಯೇ ಜಯ ಗಳಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next