Advertisement

ವಂದೇ ಭಾರತ್‌ ಮಿಷನ್‌ 1.17 ಲಕ್ಷ ಪ್ರಯಾಣಿಕರು ವಿದೇಶಗಳಿಂದ ಮುಂಬಯಿಗೆ ಆಗಮನ

08:10 PM Oct 03, 2020 | Suhan S |

ಮುಂಬಯಿ, ಅ. 2: ಕೇಂದ್ರ ಸರಕಾರದ ವಂದೇ ಭಾರತ್‌ ಅಭಿ ಯಾನದ ಭಾಗವಾಗಿ ಸೆ. 30ರ ವರೆಗೆ 1,045 ವಿಮಾನ ಯಾನಗಳ ಮೂಲಕ ವಿವಿಧ ದೇಶಗಳಿಂದ 1.17 ಲಕ್ಷ ಪ್ರಯಾಣಿಕರು ಮುಂಬಯಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.

Advertisement

ಈ ಅಭಿಯಾನದಡಿಯಲ್ಲಿ ಅ. 31ರ ವರೆಗೆ 209 ಪ್ರಯಾಣಿಕರನ್ನು ಒಳಗೊಂಡ ಮತ್ತೂಂದು ಗುಂಪುಮುಂಬಯಿಗೆ ಆಗಮಿಸುವ ನಿರೀಕ್ಷೆಯಿದೆ. ಒಟ್ಟು ಪ್ರಯಾಣಿಕರಲ್ಲಿ 38,602 ಮಂದಿ ಮುಂಬಯಿ ಯಲ್ಲಿ ಉಳಿದರೆ, 37,201 ಮಂದಿ ಮುಂಬಯಿಗೆ ಆಗಮಿಸಿ ಮಹಾ ರಾಷ್ಟ್ರದ ಇತರ ಭಾಗಗಳಿಗೆ ತೆರಳಿದ್ದಾರೆ. ಅದೇ, ಉಳಿದ 41,630 ಪ್ರಯಾಣಿಕರು ಇತರ ರಾಜ್ಯಗಳಿಗೆ ಪ್ರಯಾಣಿಸಿದ್ದಾರೆ. ಕೋವಿಡ್ ಸಂಬಂಧಿತ ನಿರ್ಬಂಧಗಳಿಂದಾಗಿ ವಿವಿಧ ದೇಶಗಳಲ್ಲಿ ಸಿಲುಕಿಕೊಂಡಿದ್ದ ಭಾರತೀ ಯರನ್ನು ಮರಳಿ ಮನೆಗೆ ಕರೆತರಲು ಕೇಂದ್ರ ಸರಕಾರವು ಮೇ 7ರಂದು “ವಂದೇ ಭಾರತ್‌ ಮಿಷನ್‌’ ಅನ್ನು ಪ್ರಾರಂಭಿಸಿದೆ.  ಇತರ ರಾಜ್ಯಗಳ ಪ್ರಯಾಣಿಕರನ್ನು ಆಯಾ ರಾಜ್ಯಗಳಿಗೆ ಕಳುಹಿಸಲು ಅಗತ್ಯ ವ್ಯವಸ್ಥೆ ಮಾಡಲಾಯಿತು ಎಂದು ಮುಖ್ಯಮಂತ್ರಿ ಕಚೇರಿ ಅಧಿಕಾರಿ ತಿಳಿಸಿದ್ದಾರೆ.

ಇತರ ರಾಜ್ಯಗಳ ಪ್ರಯಾಣಿಕರು ಸಂಬಂಧಪಟ್ಟ ರಾಜ್ಯ ಗಳಿಂದ ಪ್ರಯಾಣ ಪಾಸ್‌ಗಳನ್ನು ಸ್ವೀಕರಿಸುವವರೆಗೆ ಮುಂಬಯಿಯ ಕ್ವಾರಂಟೈನ್‌ ಕೇಂದ್ರದಲ್ಲಿ ಉಳಿ ಯುವಂತೆ ಕೇಳಲಾಯಿತು ಎಂದು ಅಧಿಕಾರಿ ಹೇಳಿದ್ದಾರೆ. ಜಿಲ್ಲಾಕಾರಿಗಳು, ಉಪನಗರಗಳು, ಬೃಹನ್ಮುಂಬಯಿ ಮಹಾನಗರ ಪಾಲಿಕೆ, ಪ್ರಾದೇಶಿಕ ಸಾರಿಗೆ ಅಧಿಕಾರಿ, ಬೆಸ್ಟ್, ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದ ಸಹಯೋಗದೊಂದಿಗೆ ಇದನ್ನು ನಡೆಸಲಾಗುತ್ತಿದೆ. ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ, ವಿದೇಶಾಂಗ ಸಚಿವಾಲಯ ಮತ್ತು ಕೇಂದ್ರ ಗೃಹ ಸಚಿವಾಲಯದ ಬೆಂಬಲದೊಂದಿಗೆ ಮಹಾರಾಷ್ಟ್ರ ಸರಕಾರ ಈ ಯೋಜನೆಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next