Advertisement

ಪಿ. ಜಯರಾಮ್‌ ಭಟ್‌, ಮನೋಹರ ಪ್ರಸಾದ್‌ ಅವರಿಗೆ ವಂದನಾ ಪ್ರಶಸ್ತಿ

01:44 PM Mar 22, 2017 | Team Udayavani |

ಮಹಾನಗರ: ಕರ್ಣಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಓ ಪಿ. ಜಯರಾಮ್‌ ಭಟ್‌ ಮತ್ತು ‘ಉದಯವಾಣಿ’ ಮಂಗಳೂರು ಸುದ್ದಿವಿಭಾಗ ಮುಖ್ಯಸ್ಥ ಮನೋಹರ ಪ್ರಸಾದ್‌ ಅವರಿಗೆ ರೋಟರಿ ಕ್ಲಬ್‌ ಮಂಗಳೂರು ಸೆಂಟ್ರಲ್‌ ಮತ್ತು ರೋಟರ್ಯಾಕ್ಟ್ ಕ್ಲಬ್‌ ಮಂಗಳೂರು ಸಿಟಿಯು, ವಾರ್ಷಿಕ ಪ್ರತಿಷ್ಠಿತ ವಂದನಾ ಪ್ರಶಸ್ತಿಯನ್ನು ಪ್ರಕಟಿಸಿದೆ.

Advertisement

ನಗರದಲ್ಲಿ ಮಂಗಳವಾರ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ, ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಡಾ | ಬಿ. ದೇವದಾಸ್‌ ರೈ ಅವರು, ಮಾ. 24ರಂದು ರಾತ್ರಿ 8 ಗಂಟೆಗೆ ನಗರದ ಹೊಟೇಲ್‌ ಮೋತಿಮಹಲ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅಭಿನಂದನ ಭಾಷಣ ಮಾಡಲಿದ್ದು, ಮೇಯರ್‌ ಕವಿತಾ ಸನಿಲ್‌, ಪ್ರಮುಖರಾದ ಅನಿಲ್‌ ಗೊನ್ಸಾಲ್ವಿಸ್‌, ಇಲಿಯಾಸ್‌ ಸೈಯಟೀಸ್‌, ಹಿತೈಷಿ ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು. 

ರೋಟರಿ ಮತ್ತು ರೋಟರ್ಯಾಕ್ಟ್ ಸಂಸ್ಥೆಯು ಪ್ರತಿಷ್ಠಿತ ವಂದನಾ ಪ್ರಶಸ್ತಿಯನ್ನು ಪ್ರತಿ ವರ್ಷ ಕ್ರೀಡೆ, ವಾಣಿಜ್ಯೋದಮ, ಶಿಕ್ಷಣ, ಕಲೆ, ಸಂಗೀತ, ಸಾಹಿತ್ಯ, ವಿಜ್ಞಾನ, ವೃತ್ತಿ ಸೇವೆ, ಮತ್ತು ಸಮಾಜ ಸೇವೆ ರಂಗದಲ್ಲಿ ಸಲ್ಲಿಸಿದ ವಿಶಿಷ್ಟ  ಧನೆಯನ್ನು ಪರಿಗಣಿಸಿ ಸಾಧಕರನ್ನು ಆಯ್ಕೆ ಮಾಡಲಾಗುವುದು. ಇದು ನಮ್ಮ ಸಂಸ್ಥೆಯ ವೃತ್ತಿಪರ ಸೇವೆಯ ಯೋಜನೆಯ ಅಂಗವಾಗಿ ನೀಡಲಾಗುತ್ತದೆ ಎಂದವರು ಹೇಳಿದರು. ಪ್ರಮುಖರಾದ ಅನಿಲ್‌ ಗೊನ್ಸಾಲ್ವಿಸ್‌, ರೇಮಂಡ್‌ ಡಿಕುನ್ನಾ, ಯತೀಶ್‌ ಸಾಲ್ಯಾನ್‌, ಸಂತೋಷ್‌ ಶೆಟ್ಟಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next