Advertisement

ಸಂಸತ್ತಿನಲ್ಲಿ ವಾಜಪೇಯಿ ಭಾವಚಿತ್ರ ಅನಾವರಣ

12:30 AM Feb 13, 2019 | Team Udayavani |

ಹೊಸದಿಲ್ಲಿ: ಸಂಸತ್ತಿನಲ್ಲಿ ಮಂಗಳವಾರ ಮಾಜಿ ಪ್ರಧಾನಿ ದಿ| ವಾಜಪೇಯಿಯವರ ಭಾವಚಿತ್ರದ ಕಲಾಕೃತಿಯನ್ನು ಅನಾವರಣಗೊಳಿಸಲಾಯಿತು. ಸರಳ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಭಾವಚಿತ್ರ ಅನಾವರಣ ಗೊಳಿಸಿದರು. ಇದೇ ವೇಳೆ, ಕಲಾಕೃತಿಯನ್ನು ರಚಿಸಿದ ಕಲಾವಿದ ಕೃಷ್ಣ ಕನ್ಹಾಯ್‌ ಅವರನ್ನು ರಾಷ್ಟ್ರಪತಿ ಸಮ್ಮಾನಿಸಿದರು. 

Advertisement

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, “ವಾಜಪೇಯಿ ಎಂದರೆ ಮೌಲ್ಯಯುತ ರಾಜಕೀಯದ ಪಾಠಶಾಲೆಯಿದ್ದಂತೆ. ಎಲ್ಲರೂ ಅವರ ವಾಕ್‌ ಚಾತುರ್ಯವನ್ನು ಹೆಚ್ಚಾಗಿ ಜ್ಞಾಪಿಸಿಕೊಳ್ಳುತ್ತಾರೆ. ಆದರೆ, ನನ್ನ ಪ್ರಕಾರ ಅವರ ಮಾತುಗಳಿಗಿಂತ ಅವರ ಮೌನವೇ ಹೆಚ್ಚು ಶಕ್ತಿಶಾಲಿಯಾಗಿತ್ತು. ಅವರು ಮೌನದಲ್ಲಿದ್ದರೂ ಅದರಲ್ಲೊಂದು ಸಂದೇಶವಿರುತ್ತಿತ್ತು’ ಎಂದರು.

ತಮ್ಮ ಮಾತು ಮುಂದುವರಿಸಿ, “ವಾಜಪೇಯಿ ಪ್ರಧಾನಿಯಾಗಿದ್ದಾಗ ವಿರೋಧ ಪಕ್ಷವಿತ್ತು. ಆದರೆ, ಅವರ ವೈಯಕ್ತಿಕ ವಿರೋಧಿಗಳಾರೂ ಇರಲಿಲ್ಲ. ಅವರ ಜೀವನದಿಂದ ಇಂದಿನ ಪೀಳಿಗೆಯ ರಾಜಕಾರಣಿಗಳು ಕಲಿಯುವುದು ಸಾಕಷ್ಟಿದೆ’ ಎಂದರು. ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿಗಳಾದ ಎಚ್‌.ಡಿ. ದೇವೇಗೌಡ, ಮನಮೋಹನ್‌ ಸಿಂಗ್‌, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಬಿಜೆಪಿ ಹಿರಿಯ ನಾಯಕ ಆಡ್ವಾಣಿ ಸಹಿತ ಆಡಳಿತಾರೂಢ ಹಾಗೂ ವಿಪಕ್ಷಗಳ ಗಣ್ಯರು ಪಾಲ್ಗೊಂಡಿದ್ದರು.

ಸಂಸತ್‌ ಭವನದ ಸೆಂಟ್ರಲ್‌ ಹಾಲ್‌ನಲ್ಲಿ ಮಾಜಿ ಪ್ರಧಾನಿ ದಿವಂಗತ ಅಟಲ್‌ ಬಿಹಾರಿ ವಾಜಪೇಯಿ ಅವರ ಭಾವಚಿತ್ರವನ್ನು ಮಂಗಳವಾರ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅನಾವರಣ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next